ಅಂತಾರಾಷ್ಟ್ರೀಯ ಆಗುಹೋಗುಗಳ ಮೇಲೆ ಗಂಭೀರವಾದ ಟೀಕೆ, ಟಪ್ಪಣಿ ಹಾಗೂ ವಿಮರ್ಶೆ ಮಾಡಿದ್ದರ ಬಗ್ಗೆ ಈ ಕೃತಿಯಲ್ಲಿ 36 ಲೇಖನಗಳಿವೆ. 2007 - 2009ರ ಅವಧಿಯಲ್ಲಿ ವಿಜಯವಾಣಿಗೆ ಬರೆದ ಅಂಕಣ ಬರೆಹಗಳು. ದೇಶ ವಿದೇಶಗಳಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಕುರಿತು ಗಂಭೀರ ಕಾಳಜಿಯನ್ನೇ ಮಾತೃಭಾಷೆಯಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಸ್ಟಾಲಿನ್, ಮಾವೋ, ಬುದ್ಧದೇವರ ವಿಮರ್ಶೆ, ಅಮೇರಿಕಾದ ಉದಾರವಾದ ಹಾಗೂ ಯಜಮಾನಿಕೆಯ ವಿಮರ್ಶೆ, ಎಡ-ಬಲಪಂಥಗಳೆಡರಲ್ಲೂ ಇರುವ ಅತಿರೇಕಗಳ ಕುರಿತಾದ ಕಟು ಟೀಕೆ- ಇವೆಲ್ಲವನ್ನೂ ಅವರು ಯಾವುದೇ ತಾತ್ವಿಕ ಕಟ್ಟುಪಾಡುಗಳಿಗೂ ಸಿಕ್ಕುಬೀಳದೇ ಸ್ವತಂತ್ರವಾಗಿ ನಿರ್ವಹಿಸುತ್ತಾರೆ. ಹಾಗೆ ಮಾಡುತ್ತಲೇ, ಹೊಸ ಹೊಸ ಒಳನೋಟಗಳನ್ನು ಇಲ್ಲಿ ನೀಡಿದ್ದಾರೆ.
ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...
READ MORE