ಲೇಖಕ ಎ.ಆರ್. ಮಣಿಕಾಂತ ಅವರು ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಹಾಡು ಹುಟ್ಟಿದ ಸಮಯ ಶೀರ್ಷಿಕೆಯಡಿ ಅಂಕಣ ಬರೆಹಗಳನ್ನು ಬರೆಯುತ್ತಿದ್ದು, ಅವುಗಳ ಸಂಗ್ರಹ ಕೃತಿಯೇ ‘ಹಾಡು ಹುಟ್ಟಿದ ಸಮಯ. ಸಿನಿಮಾ, ಸಾಹಿತ್ಯ ವಲಯದ ಮಧುರ ಗೀತೆಗಳ ಹುಟ್ಟು ಹಾಗೂ ಅವು ಕಾಡುವ ಭಾವಗಳನ್ನು ಅನುಸರಿಸಿ ಬರೆದ ಲೇಖನಗಳಿವು. ಒಂದು ಹಾಡು ಹುಟ್ಟುವ ಸಮಯ, ಆ ಹುಟ್ಟಿಗೆ ಕಾರಣ ತದನಂತರ ಅದು ಸಾರ್ವಜನಿಕ ಸಲಯದಲ್ಲಿ ಬೀರಿದ ಪರಿಣಾಮ ಎಲ್ಲವುಗಳ ಬಗ್ಗೆ ತುಂಬಾ ಆಪ್ತವಾದ ಭಾಷೆಯಲ್ಲಿ ಬರೆದ ಕೃತಿ.
ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ. ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ...
READ MORE