ಡಾ.ಅಶೋಕ ಶೆಟ್ಟರ್ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದರು. ತಮ್ಮ ಊರು ಬೆಳಗಾವಿಯ ಬೈಲಹೊಂಗಲ ಹಾಗೂ ಅವರು ಕಲಿತು, ಬೋಧನಾ ವೃತ್ತಿ ಮಾಡಿದ ಧಾರವಾಡದ ಹಳೆಯ ನೆನಪುಗಳನ್ನು ಚೇತೋಹಾರಿಯಾಗಿ ಡಾ.ಅಶೋಕ ಶೆಟ್ಟರ್ ’ಗದ್ಯಂ ಹೃದ್ಯಂ’ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಬೇರೆ ಜಿಲ್ಲೆಗಳ ಸಾಹಿತಿಗಳು, ಬಂಡಾಯ ಸಾಹಿತ್ಯ ಸಂಘಟನೆ, ಸಾಧನಕೇರಿಯ ಪರಿಸರದ ಬಗ್ಗೆ ಬರೆದಿದ್ದಾರೆ. ರಿಸರ್ಚ್ ಫೆಲೊ ಆಗಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿದ್ದ ವೇಳೆ ಅಲ್ಲಿ ಕಂಡ ಸಿಖ್ಖರ ವಿರುದ್ಧದ ದೌರ್ಜನ್ಯದ ಚಿತ್ರಣವೂ ಕೃತಿಯಲ್ಲಿದೆ.
ಲೇಖಕಿ ಸಂಧ್ಯಾರಾಣಿ ಅವರು ಈ ಕೃತಿಯ ಬಗ್ಗೆ ಹೇಳುತ್ತಾ 'ಇತಿಹಾಸ ಕಲಿಸುವ ಮೇಷ್ಟ್ರಾಗಿರುವ ಅಶೋಕ್ ಶೆಟ್ಟರ್ ಅವರ ಬರಹಗಳಲ್ಲಿ ಒಂದೇ ಸಮಯಕ್ಕೆ ಮೇಷ್ಟ್ರರ ತಾಳ್ಮೆ, ವಿದ್ಯಾರ್ಥಿಗಳ ಲವಲವಿಕೆ ಕಂಡು ಬಂದರೆ ಆಶ್ಚರ್ಯ ಪಡಬೇಕಿಲ್ಲ. ಅವರ ಬರವಣಿಗೆಯಲ್ಲಿ ನೆನಪುಗಳ ಪ್ರಪಂಚದ ಜೊತೆಜೊತೆಗೆ ಕಣ್ಣೆದುರಿಗಿರುವ ಪ್ರಪಂಚ ಸಹ ಅಷ್ಟೇ ಸಹಜವಾಗಿ ಒಡಮೂಡಿರುತ್ತದೆ'. ಎಂದಿದ್ದಾರೆ.
ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಹತ್ತಾರು ವಿಷಯಗಳು ಇಲ್ಲಿ ಚರ್ಚೆಯಾಗುತ್ತವೆ. ಕೀ.ರಂ., ಏಣಗಿ ನಟರಾಜ್, ಸಾಕೇತ್ ರಾಜನ್, ಸಿ.ಬಸವಲಿಂಗಯ್ಯ ಅವರ ಕುರಿತಾದ ವ್ಯಕ್ತಿಚಿತ್ರಗಳನ್ನೂ ಈ ಕೃತಿ ಒಳಗೊಂಡಿದೆ.
ಅಶೋಕ ಶೆಟ್ಟರ್ ಸೃಜನ ಮತ್ತು ಸೃಜನೇತರ ಪ್ರಕಾರಗಳೆರಡರಲ್ಲೂ ಆಸಕ್ತಿ ಹೊಂದಿರುವ ಅಶೋಕ ಶೆಟ್ಟರ್ ಕನ್ನಡದ ಗಮನಾರ್ಹ ಬರಹಗಾರರಲ್ಲೊಬ್ಬರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಪೂರೈಸಿದ ಇವರು ಐದು ವರ್ಷ (1981-86) ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಸಂಶೋಧನ ವಿದ್ಯಾರ್ಥಿ ಯಾಗಿದ್ದವರು. ೧೯೮೬ರಿಂದೀಚೆ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. (ವಿಶ್ವವಿದ್ಯಾಲಯದ ವಾಚನಾಲಯದೊಳಗೆ' ಕವನ ಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಇವರು ಸಾಹಿತ್ಯ ಹಾಗೂ ಇತಿಹಾಸ ಕುರಿತು ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆದ ಹಲವಾರು ಲೇಖನಗಳು ಪ್ರಕಟವಾಗಿವೆ. “ಸ್ಟಡೀಸ್ ಇನ್ ಕರ್ನಾಟಕ ...
READ MORE