ವಿನಯಾ ಒಕ್ಕುಂದ ಅವರ ಅಂಕಣ ಬರಹಗಳ ಸಂಕಲಿತ ರೂಪ ನೀರನಡೆ. ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ವಿನಯಾ ಅವರು ದೇಶದ ಸಾಮಾಜಿಕ, ರಾಜಕೀಯ ಪ್ರಚಲಿತ ವಿದ್ಯಮಾನಗಳಿಗೆ ಲೇಖಕಿಯಾಗಿ, ಜನಸಾಮಾನ್ಯರ ಮನದಾಳದ ದುಗುಡವನ್ನು ಈ ಕೃತಿಯಲ್ಲಿರುವ ಲೇಖನಗಳ ಮೂಲಕ ಹೊರಗೆಡವಿದ್ದಾರೆ. ಸಾಹಿತ್ಯ, ಸಾಮಾಜಿಕ, ರಾಜಕೀಯ ಹಾಗೂ ಮಾನವೀಯ ಈ ಎಲ್ಲಾ ನೆಲೆಗಟ್ಟಿನಲ್ಲಿ ಮೂಡಿರುವ ಈ ಲೇಖನಗಳು ಇಂದಿನ ಸಮಾಜದ ಅವ್ಯವಸ್ಥೆಯ ಕನ್ನಡಿಯಂತಿವೆ.
ಜಾತಿ, ಧರ್ಮಗಳ ನೆಲೆಗಳಾಚೆ ನಿಂತು, ಬಹುತ್ವದ ಸಂಸ್ಕೃತಿಯನ್ನು ಕಟ್ಟಿಕೊಂಡು ಬದುಕಿದ ಇಲ್ಲಿನ ಜನರ ತಲ್ಲಣಗಳಿಗೆ, ನೋವಿಗೆ ಧ್ವನಿಯಾಗುತ್ತಾ; ನೊಂದವರ ಕಣ್ಣಿಗೆ ಕತವಸ್ತ್ರವಾಗಿದ್ದಾರೆ ಎನ್ನುವ ಜಗದೀಶ್ ಕೊಪ್ಪ ಅವರ ಮಾತುಗಳು ಅತಿರೇಕ ಅನ್ನಿಸುವುದಿಲ್ಲ. ಈ ಕೃತಿಯಲ್ಲಿ ಮುವತ್ತಕ್ಕೂ ಹೆಚ್ಚು ಲೇಖನಗಳಿವೆ. ಪ್ರತಿ ಲೇಖನವು ಆಯಾ ಸಂದರ್ಭದ ಪ್ರಚಲಿತ ವಿದ್ಯಮಾನದ ಬಗ್ಗೆ ಬರಹಗಾರ್ತಿಯಾಗಿ ಹಾಗೂ ಸಾಮಾನ್ಯ ಮಹಿಳೆಯಾಗಿ ಆ ವಿದ್ಯಮಾನ ಕಲಕಿದ ರೀತಿ, ಓದುಗರು ನೋಡಬೇಕಾದ ರೀತಿಯನ್ನು ಕಟ್ಟುಕೊಟ್ಟಿದ್ದಾರೆ.
ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...
READ MORE