ಸುತ್ತಮುತ್ತ- ಹೊಸನಗರ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟಗೊಂಡ ಶ್ರೀಕಂಠ ಹೆಚ್.ಆರ್ ಅವರ ಅಂಕಣ ಬರಹಗಳ ಸಂಕಲನ. ಸುತ್ತಮುತ್ತ ನಡೆಯುವ ದೈನಂದಿನ ಘಟನಾವಳಿಗಳು, ಐತಿಹಾಸಿಕ ಹಿನ್ನಲೆ, ವ್ಯಕ್ತಿ ಚಿತ್ರಣ, ಪರಿಸರ, ಕೃಷಿ, ಪ್ರವಾಸ, ಚಾರಣ ಕುರಿತು ಬರೆಯುವ ವೇಳೆ ಸಾಮಾಜಿಕ ಜಾಗೃತಿ ಸೂಕ್ಷತೆಯ ಗ್ರಹಿಕೆ, ವಿಭಿನ್ನ ದೃಷ್ಟಿಕೋನ, ನೇರವಂತಿಕೆಯನ್ನು ಬರಹದಲ್ಲಿ ಹುದುಗಿಸಿಡಿವುದು ಸುಲಭದ ಮಾತಲ್ಲ. ಪುಸ್ತಕದ ಕೊನೆಯ ಪದದವರೆಗೂ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಶಕ್ತಿ ಲೇಖಕರ ನಿರೂಪಣಾ ಶೈಲಿಗಿದೆ. 'ಸುತ್ತಮುತ್ತ ಸಂಗ್ರಹ ಯೋಗ್ಯ ಪುಸ್ತಕ ಆಗುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕ ಇಂದಿನ, ಹಿಂದಿನ, ಮುಂದಿನ ವಿಷಯಗಳ ಮಾರ್ಗಸೂಚಿ ಎಂಬ ಬಗ್ಗೆ ಅನುಮಾನವಿಲ್ಲ.