ಏಷಿಯಾದ ರಾಷ್ಟ್ರಗಳಾದ ಭಾರತ ಮತ್ತು ಚೀನಾಗಳ ನಡುವಿನ ಗಡಿ ವಿಶ್ವದ ಅತ್ಯಂತ ಶಸ್ತ್ರಸಜ್ಜಿತ ಗಡಿಯಾಗಿ ಬದಲಾಗಿದ್ದು, ಈ ಗಡಿ ಐವತ್ತರ ದಶಕದ ಉತ್ತರಾರ್ಧದಲ್ಲಿ ಹೆಚ್ಚಿನ ಮುನ್ಸೂಚನೆಯಿಲ್ಲದೇ ಸ್ಫೋಟಿಸಿತು ಹಾಗೂ ಅಂತಿಮವಾಗಿ ಗಡಿ ಸಮಸ್ಯೆ ಇಂದಿಗೂ ಬಗೆಹರಿಯದೇ ಉಳಿದುಕೊಂಡಿದೆ ಮತ್ತು ತನ್ನ ಹೈಡ್ರಾ ತಲೆಯನ್ನು ಆಗಾಗ ಎತ್ತಿ ಎರಡೂ ದೇಶಗಳ ನಡುವಿನ ಶಾಂತಿಯನ್ನು ಕಲಕುತ್ತಿರುವ ಹಿನ್ನೆಲೆಯೊಂದಿಗೆ, ಭಾರತ - ಚೀನಾ ಗಡಿಸಮಸ್ಯೆಯ ಇತಿಹಾಸ ಮತ್ತು ಸ್ವರೂಪ ವಿಶ್ಲೇಷಿಸಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೊಸ, ಅಸಾಂಪ್ರದಾಯಿಕ ದೃಷ್ಟಿಕೋನ ಮತ್ತು ವಿಶ್ಲೇಷಣಾ ಪರಿಕರಗಳ ಸಹಾಯದಿಂದ ಸಮಸ್ಯೆಯ ವಾಸ್ತವಿಕತೆಯನ್ನೇ ಪ್ರಶ್ನಿಸಲು ಈ ಕೃತಿ ಪ್ರಯತ್ನಿಸುತ್ತದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಈ ಎರಡು ಬೃಹದ್ ರಾಷ್ಟ್ರಗಳ ನಡುವಿನ ವೈಮನಸ್ಯ ಹಿಮಾಲಯದ ಗಡಿಯಿಂದ ಹಿಂದೂಮಹಾಸಾಗರಕ್ಕೆ ವರ್ಗಾಯಿಸಲ್ಪಟ್ಟಿದೆಯೇ, ಹಾಗಿದ್ದರೆ ಈ ಹೊಸ ವಸ್ತುಸ್ಥಿತಿಯ ಸ್ವರೂಪಗಳೇನು, ಭಾರತದ ಮೇಲೆ ಇದರ ದೂರಗಾಮಿ ಪರಿಣಾಮಗಳೇನು ಎಂಬ ಮಹತ್ವದ ಹಾಗೂ ಸಮಕಾಲೀನ ಪ್ರಶ್ನೆಗಳನ್ನೂ ಈ ಕೃತಿ ವಿಶ್ಲೇಷಣೆಗೆ ತೆರೆಯುತ್ತದೆ. ವಿಜಯ ವಾಣಿ ದಿನಪತ್ರಿಕೆಯಲಲ್ಲಿ ಪ್ರಕಟವಾದ ಲೇಖನ ಸರಣಿಯ ಸಂಗ್ರಹವಾಗಿದೆ.
ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...
READ MORE