'ಜಾಗೋ ಭಾರತ್ - 3' ಚಕ್ರವರ್ತಿ ಸೂಲಿಬೆಲಿ ಅವರ ಅಂಕಣ ಬರೆಹಗಳ ಸಂಕಲನ. ಇದರಲ್ಲಿನ ಬರಹಗಳು ವೈವಿಧ್ಯಮಯ, ಮಾಹಿತಿಭರಿತ, ಧ್ವನಿಪೂರ್ಣ. ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಸಮಸ್ಯೆಗಳು ಇತ್ಯಾದಿ ವಿಶ್ಲೇಷಣೆ ಜಾಗೋ ಭಾರತ್ ನಲ್ಲಿ ಅಡಗಿದೆ.
ಭಾರತೀಯ ಸಮಾಜದ ಹಿನ್ನೆಲೆ, ಋಷಿಗಳು, ಋಷಿ ಸದೃಶರು, ಸಮಾಜಸೇವೆಯ ವಿವಿಧ ಕಾಣದ ಮುಖಗಳು ಇತ್ಯಾದಿ ಅಂಶಗಳ ಬಗೆಗೆ ಹೆಚ್ಚಿನ ಅಧಿಕೃತವಾದ ಮಾಹಿತಿಯನ್ನು ದಾಖಲಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರಮೋದಿ, ಸ್ವಾಮಿ ವಿವೇಕಾನಂದರ ಮೇರುಸದೃಶ ವ್ಯಕ್ತಿತ್ವ, ಸರ್ಕಾರಗಳ ಹಗರಣ, ಹತ್ಯೆಗಳು, ಸಂಘ ಸಂಸ್ಥೆಗಳು ನಡೆಸುತ್ತಿರುವ ಸಾಮಾಜಿಕ ಸಹಾಯಗಳು ಮುಂತಾದುವನ್ನು ಕುರಿತು ದಾಖಲಿಸಿರುವ ಅಂಶಗಳು ಗಮನಾರ್ಹ.
ಚಕ್ರವರ್ತಿ ಸೂಲಿಬೆಲಿ ಎಂದೇ ಗುರುತಿಸಿಕೊಳ್ಳುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. 1980ರ ಏಪ್ರಿಲ್ 9 ರಂದು ಜನನ. ಓದಿದ್ದು, ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ. ತಂದೆ ದೇವದಾಸ್ ಸುಬ್ರಾಯ್ ಶೇಟ್, ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿದ್ದಾರೆ. ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ನಂತರ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು. ವಾಗ್ಮಿ, ಅಂಕಣಕಾರ. ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಸೂಲಿಬೆಲಿ ಅವರು ‘ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ...
READ MORE