ಲೇಖಕ ಕ್ಷಿತಿಜ ಬೀದರ ಅವರು ಧ್ಯಾನದ ಕುರಿತು ವಿಶ್ವವಾಣಿ ದಿನಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಅಂಕಣವಾಗಿ ಬರೆದ ಚಿಂತನೆಗಳ ಸಂಗ್ರಹ-ತಾನಾರೆಂದು ತಿಳಿದೊಡೆ. ಬಹಳ ಸಲ ನಾವು ಇಲ್ಲದ ಸಮಸ್ಯೆಯನ್ನು ಇದೆ ಎಂದು ಅರ್ಥೈಸಿ ಸಮಸ್ಯೆಗಳನ್ನು ತಂದುಕೊಂಡು ಮರುಗುತ್ತೇವೆ. ವಾಸ್ತವವಾಗಿ, ಸಮಸ್ಯೆಯೇ ಅದಿರುವುದಿಲ್ಲ.ಇಂಥಹ ವಿಚಾಋಗಳ ಹಾಗೂ ಪ್ರೇರಣಾತ್ಮಕವಾಗಿರುವ ಬರಹಗಳ ಸಂಕಲನವಿದು.ವಿಶೇಷವಾಗಿ ಧ್ಯಾನದ ಮಹತ್ವ, ವಿಶೇಷತೆ, ಮನುಷ್ಯನ ನಡವಳಿಕೆಗಳ ಮೇಲೆ ಅದು ಉಂಟು ಮಾಡುವ ಪರಿಣಾಮಗಳು ಇತ್ಯಾದಿ ವಿಷಯಗಳನ್ನು ಲೇಖಕರು ಚರ್ಚಿಸಿದ್ದಾರೆ.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE