ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಅಂಕಣ ಮಾಲೆಯ ಭಾಗವೇ ’ತೃಣಮಾತ್ರ’. ಒಟ್ಟು 141 ಲೇಖನಗಳಿರುವ ಕೃತಿ ಇದು. ಲೇಖಕರ ಪ್ರಕಾರ ದೇಹ, ದೇಶ ಹಾಗೂ ದೇವ ಎಂಬ ಮೂರು ಅಂಶಗಳನ್ನು ಆಧರಿಸಿ ಅಂಕಣಗಳು ಮೂಡಿಬಂದಿವೆ. ಸಣ್ಣಸಣ್ಣ ಸಂಗತಿಗಳಿಂದ ಹಿಡಿದು ಅನುಭಾವದವರೆಗೆ ಲೇಖಕರು ಕೃತಿ ರಚಿಸಿದ್ದಾರೆ.’ಸುಲಿದ ಬಾಳೆಯ ಹಣ್ಣಿನಂದದಿ’ ಎನ್ನುವಂತೆ ಬರೆದ ಕೃತಿ ಇದಾಗಿರುವುದರಿಂದ ಥಟ್ಟನೆ ಸೆಳೆಯುತ್ತದೆ.
ಓದುಗರನ್ನು ಸೆಳೆಯಲು ಇನ್ನಿಲ್ಲದ ಯತ್ನ ನಡೆಸುವ ಸಾವಣ್ಣ ಪ್ರಕಾಶನ ಕೃತಿಯನ್ನು ಹೊರತಂದಿದೆ.
ಅಹೋರಾತ್ರ ಎಂತಲೇ ಪರಿಚಿತರಾಗಿರುವ ನಟೇಶ ಪೋಲಪಳ್ಳಿಯವರು ಮೂಲತಃ ಬೆಂಗಳೂರಿನವರು. ವ್ಯಕ್ತಿತ್ವ ವಿಕಸನದ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ, ಒಳಗನ್ನಡಿ, ಆಯತನ, ಮೂರ್ಖನ ಮಾತುಗಳು, ಗಗನ ಗೋಚರಿ ವಸುಂದರಾ. ...
READ MORE