’ಸಂಪತ್ತಿನೊಳಗೊಬ್ಬ ಸಂತ’ ಕೃತಿಯು ರಾಜಕಾರಣಿ- ಛಾಯಾಗ್ರಾಹಕ ಎಂ. ವೈ. ಘೋರ್ಪಡೆ ಅವರ ಜೀವನ-ಚಿತ್ರ. ಘೋರ್ಪಡೆ ಅವರನ್ನು ಕುರಿತು ವಿವಿಧ ಲೇಖಕರು ಬರೆದ ಲೇಖನಗಳನ್ನು ಯುವ ವಿದ್ವಾಂಸ ಶ್ರೀಧರ ಹೆಗಡೆ ಭದ್ರನ್ ಸಂಪಾದಿಸಿದ್ದಾರೆ.
ಎಂ. ವೈ. ಘೋರ್ಪಡೆ ಅಂದ ತಕ್ಷಣ ನೆನಪಿಗೆ ಬರುವುದು ರಾಜ ಮನೆತನ ಮತ್ತು ಸಮರ್ಥ ರಾಜಕಾರಣಿ. ಅವರ ಹಲವು ಮುಖಗಳು 'ಸಂಪತ್ತಿನೊಳಗೊಬ್ಬ ಸಂತ ' ಕೃತಿಯಲ್ಲಿ ದಾಖಲಾಗಿವೆ. ಈ ಕೃತಿಯಲ್ಲಿ ವಿವಿಧ ಲೇಖಕರ, ಸಂಶೋಧಕರ ಲೇಖನಗಳಿವೆ.
ಆರ್ ವೆಂಕಟರಾಮನ್, ಇಂದಿರಾ ಗಾಂಧಿ, ಷ.ಶೆಟ್ಟರ್, ಚಿರಂಜೀವಿ ಸಿಂಗ್, ಎಸ್. ನಿಜಲಿಂಗಪ್ಪ. ಆರ್. ಸಿ. ಹಿರೇಮಠ್, ಎಚ್.ವೈ. ಶಾರದಾ ಪ್ರಸಾದ್, ಮಲ್ಲಿಕಾಘಂಟಿ, ಕೃಪಾಕರ, ಜಿ.ಪಿ. ಬಸವರಾಜು, ಟಿ. ಎನ್. ಎ. ಪೆರುಮಾಳ್, ಶಾಂತಾ ನಾಗರಾಜ್, ಪಿ. ಎಸ್. ಗೀತಾ, ಗಿರಿಧರ ಖಾಸನೀಸ, ಎಂ. ಸಿ ಪ್ರಕಾಶ್, ಡಿ. ವಾದಿರಾಜ್, ಎಸ್. ಜಿ. ಸಿದ್ಧರಾಮಯ್ಯ, ಕೆ. ವಿ. ತಿರುಮಲೇಶ್, ವಿ.ಕೆ.ಆರ್.ವಿ. ರಾವ್, ರವೀಂದ್ರ ಭಟ್ ಮಾವಖಂಡ, ಜಯಪ್ರಕಾಶ್ ನಾರಾಯಣ ಮುಂತಾದವರ ಬರಹಗಳನ್ನು ಸಂಕಲಿಸಲಾಗಿದೆ.
ಹಿರಿಯ ಲೇಖಕ ಹಾ.ಮಾ. ನಾಯಕ್ ಅವರು ಘೋರ್ಪಡೆ ಅವರನ್ನು ಕುರಿತು ಹೀಗೆ ಬರೆದಿದ್ದಾರೆ-
’ಸಾಹಿತ್ಯ, ಚಿತ್ರಕಲೆ, ಸಂಗೀತಗಳಲ್ಲಿಯೂ ಘೋರ್ಪಡೆಯವರಿಗೆ ಆಸಕ್ತಿ. ಜೀವನವನ್ನು ಅದರ ಎಲ್ಲ ನಿಟ್ಟುಗಳಿಂದಲೂ ಪೋಷಿಸಬೇಕೆಂಬುದು ಅವರ ಆಸೆ. ಅವರ ಜೊತೆ ಸಂಭಾಷಿಸುವುದೆಂದರೆ ಬೆಳಕು ಮಾಧುರ್ಯಗಳನ್ನು ಸಂಪರ್ಕಿಸಿದಂತೆ. ಸಾರ್ವಜನಿಕ ಜೀವನವೆಂದರೆ ಕೇವಲ ರಾಜಕಾರಣವಲ್ಲ, ಚುನಾವಣೆಯಲ್ಲ, ಅಧಿಕಾರವಲ್ಲ, ಸಾಹಿತ್ಯ, ಕಲೆ ಅಧ್ಯಯನ, ಆಧ್ಯಾತ್ಮ ಇವನ್ನೆಲ್ಲ ಅಂಟಿಸಿಕೊಂಡ ರಾಜಕಾರಣಿಯ ಕೆಲಸ ಮಾಡುವುದು ಸಾಧ್ಯ ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದಾರೆ’.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...
READ MORE