ರಾಷ್ಟ್ರಕವಿ ಅವರ ಅಪರೂಪದ ಮತ್ತು ಮಹತ್ವದ ಛಾಯಾಚಿತ್ರಗಳನ್ನು ಒಳಗೊಂಡ ಅಪರೂಪದ ಚಿತ್ರ ಸಂಪುಟವಿದು. ಕುವೆಂಪು ಅವರ ಬಾಲ್ಯದ ದಿನಗಳಿಂದ ಹಿಡಿದು ಬದುಕಿನ ಮಹತ್ವದ ಘಟನೆಗಳನ್ನು ಚಿತ್ರಗಳಲ್ಲಿ ದಾಖಲಾಗಿವೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಈ ಸಂಪುಟದಲ್ಲಿ ಕುವೆಂಪು ಅವರ ಬೆಳವಣಿಗೆಯನ್ನು ಚಿತ್ರಗಳ ಮೂಲಕ ದಾಖಲಿಸಲಾಗಿದೆ. ಚಿತ್ರಗಳೇ ಮಾತನಾಡುತ್ತವೆ. ಮತ್ತು ಅವೇ ಕತೆ ಹೇಳುತ್ತವೆ. ಭಾವಚಿತ್ರದ ಜೊತೆಯಲ್ಲಿಯೇ ಮಹತ್ವದ ಘಟನೆಗಳು, ಕುಟುಂಬದ ಸದಸ್ಯರ ಜೊತೆಗಿನ, ಕಾರ್ಯಕ್ರಮದ, ಆಪ್ತರು-ಸ್ನೇಹಿತರ ಜೊತೆಗಿನ ಚಿತ್ರಗಳೂ ಈ ಗ್ರಂಥದಲ್ಲಿವೆ. ಕುವೆಂಪು ಅವರ ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಅವರ ಮದುವೆ ಆಮಂತ್ರಣ ಪತ್ರಿಕೆಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಸೇರಿಸಿರುವುದು ವಿಶೇಷ. ಆರ್.ಎಸ್. ನಾಯ್ಡು, ಆರ್. ರಾಮಮೂರ್ತಿ ಮತ್ತಿತರ ಕಲಾವಿದರು ರಚಿಸಿದ ರೇಖಾಚಿತ್ರಗಳು ಇದರಲ್ಲಿವೆ. ಕುವೆಂಪು ಪ್ರಿಯರ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಈ ಗ್ರಂಥವು ಛಾಯಾಚಿತ್ರ ಆಧರಿಸಿ ರೂಪಿಸುವ ಜೀವನ ಚರಿತ್ರೆ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಂತಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...
READ MORE