ಯುವಜನರನ್ನು ಅಪಾರವಾಗಿ ಪ್ರಭಾವಿಸಿದ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಆಲ್ಬರ್ಟ್ ಕಮೂ, ಬಂಡುಕೋರ ಮನಸು ಸೃಷ್ಟಿಸುವ ಸಾಹಿತ್ಯದ ಪ್ರತಿನಿಧಿ ಎಂದೇ ಪ್ರಸಿದ್ಧಿಯಾದವರು. ಸದಾ ಕಾಲಕ್ಕೂ ಪ್ರಸ್ತುತವಾಗುವ ಮನುಷ್ಯನ ಅಸ್ಮಿತೆ, ವ್ಯಕ್ತಿ ಸ್ವಾತಂತ್ರ್ಯ, ನೈತಿಕತೆ ಅನೈತಿಕತೆಗಳ ಪಾತ್ರವೇನು? ಇತ್ಯಾದಿ ಮೂಲಭೂತ ಪ್ರಶ್ನೆಗಳು ಬಂದಾಗಲೆಲ್ಲಾ ಅಲ್ಲಿ ಕಮೂವಿನ ಸಾಹಿತ್ಯ ಚರ್ಚೆಗೆ ಇದ್ದದ್ದೆ. ಕಮೂವಿನ ಕುರಿತು ಬಿಡಿಬಿಡಿಯಾಗಿ ಇಲ್ಲಿ ಪ್ರಸ್ತಾಪಿಸಲಾಗಿದೆ. ಆತನ ಜೀವನ ಪರಿಚಯದ ಜತೆಗೆ ಆತ ಬರೆದಿರುವ ಎರಡು ಕಥೆಗಳು, ನಾಲ್ಕು ಪ್ರಬಂಧಗಳ ಅನುವಾದ ಇಲ್ಲಿ ನೀಡಲಾಗಿದೆ. ಇದರ ಜತೆಗೆ ಆತ ಪ್ರತಿಪಾದಿಸಿದ ಬಂಡಾಯ, ಅಸಂಗತವಾದ, ಸಿಸಿಫಸ್ ಕಲ್ಪಿತ ಕಥನ, ಆತನ ಮುಖ್ಯ ಕಾದಂಬರಿಗಳ ಒಟ್ಟು ಸಾರಾಂಶವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...
READ MORE'ಕಮೂ ತರುಣ ವಾಚಿಕೆ' ಕೃತಿಯ ಕುರಿತು ಕೃತಿಯ ಲೇಖಕರಾದ ಕೇಶವ ಮಳಗಿ ಅವರ ನುಡಿಗಳು.