‘ಮೊಟ್ಟೆಯೊಡೆದ ಮರಿಗಳು’ ಶಾರದಾ ವಿ. ಮೂರ್ತಿ ಅವರು ಮಕ್ಕಳಿಗಾಗಿ ಬರೆದ ಕಥಾ ಸಂಕಲನ. ಮಕ್ಕಳ ಮಾನಸಿಕ, ಭಾವನಾತ್ಮಕ, ಶೈಕ್ಷಣಿಕ ಸಮಸ್ಯೆಗಳನ್ನೆತ್ತಿ ಕೊಂಡು ಅವುಗಳಿಗೆ ಪರಿಹಾರ ಹುಡುಕಲು ಯತ್ನಿಸಲಾಗಿದೆ.
ಕಥಾ ನಿರೂಪಣ ತಂತ್ರ ಅತ್ಯಂತ ಸರಳ ಹಾಗೂ ನೇರ. ಬರವಣಿಗೆಯ ಶೈಲಿ ಜನಾಕರ್ಷಕವಾಗಿದ್ದು ಇದೊಂದು ಸಾರ್ಥಕ ಕೃತಿ ಎನ್ನಬಹುದು. ಪ್ರತಿ ಕಥೆಯೂ ನೀತಿ ಬೋಧಕವಾಗಿದೆ. ಸರಳ ಭಾಷೆಯಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಇಲ್ಲಿಯ ಕಥೆಗಳನ್ನು ನಿರೂಪಿಸಲಾಗಿದೆ. ಈ ಕೃತಿಗೆ 2017ನೇ ಸಾಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿ ಲಭಿಸಿದೆ
ಶಾರದಾ ಅವರು ಮೂಲತಃ ಶಿವಮೊಗ್ಗದವರು. ತಂದೆ- ಜೆ.ಎಲ್. ರಂಗಾಭಟ್ಟರು, ತಾಯಿ- ಮಹಾಲಕ್ಷ್ಮಮ್ಮ. ಶಿಶು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಗೈದಿರುವ ಲೇಖಕಿ ಶಾರದಾ ವಿ. ಮೂರ್ತಿ. ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧಗಳ ರಚನೆಯಿಂದ ಮಕ್ಕಳ ಮನೋವಿಕಾಸಕ್ಕೆ ಕಾಣ್ಕೆ ನೀಡಿದ್ದಾರೆ. ಓದಿನ ಹಂತದಲ್ಲೇ ಶಿಶುಸಾಹಿತ್ಯದೆಡೆಗೆ ಆಕರ್ಷಿತರಾದವರು. ಬರವಣಿಗೆ ಫಲಿಸುತ್ತಲೇ ಅದನ್ನೇ ಉಸಿರಾಗಿಸಿ ಕೊಂಡವರು. ಬೆಳ್ಳಿಚುಕ್ಕಿ, ಸ್ನೇಹಸೌರಭ, ಅನನ್ಯ, ಅರ್ಥ, ಮಿಡಿದ ಹೃದಯ, ಗೆಲುವು, ಆಂತರ್ಯ, ನಿರ್ಧಾರ ಮತ್ತಿತರ ಕಾದಂಬರಿಗಳನ್ನು ರಚಿಸಿದ್ದಾರೆ. ದಿಶ, ಮೌಲ್ಯ, ಹೊಂಬೆಳಗು, ಬಾಂಧವ್ಯ, ಶೋಧ, ಬೇರು, ಹಾಗೂ ಅನುಬಂಧ ಕಥಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಮಾತಾಡಿ ಗೊಂಬೆಗಳೆ, ...
READ MORE