ಪ್ರಬುದ್ಧತೆಯ ಹೊಸ್ತಿಲಲ್ಲಿರುವ ಮಕ್ಕಳಿಗಾಗಿ ಕತೆಗಳು
ಇದುವರೆಗೆ ಮಕ್ಕಳಿಗಾಗಿ ಬಂದಿರುವ ಕಥೆಗಳು ಪಂಚತಂತ್ರ, ಅಕಬರ್-ಬೀರಬಲ್, ನಸ್ರುದ್ದೀನ್ ಕಥೆಗಳು ಈ ರೀತಿ ಪುರಾತನ ಹಾಗೂ ಪರಂಪರಾಗತ ವಸ್ತುಗಳನ್ನೊಳಗೊಂಡವು. ಆದರೆ ಇಂದು ಮಕ್ಕಳ ಪರಿಪೇಕ್ಷ ಬದಲಾಗಿದೆ, ಇಂದೂ ಕೂಡ ಅವರಿಗೆ ರಾಜರಾಣ ಕಥೆಗಳು, ಪ್ರಾಣ ಪಕ್ಷಿ ಕತೆಗಳು ಹೇಳುವುದು ಸಮಂಜಸವಲ್ಲ. ಅಲ್ಲದೆ ಮಕ್ಕಳ ವಯಸ್ಸಿಗೆ ಅನುಗುಣವಾಗಿಯೂ ಸಾಹಿತ್ಯದ ವಸ್ತು, ವಿನ್ಯಾಸಗಳು ಬದಲಾಗುತ್ತವೆ. ಅಂತೆಯೇ ಜುಗ್ನು ಕಥೆಯಲ್ಲಿ ಹದಿಹರೆಯಕ್ಕೆ ಸಮೀಪಿಸುತ್ತಿರುವ ಮಕ್ಕಳಿಗಾಗಿ ವಾಸ್ತವದ ನೆಲೆಗಟ್ಟಿನ ಕಥೆಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಮಕ್ಕಳ ಸುತ್ತಮುತ್ತಲಿನ ಸಮಾಜಜೀವನದಲ್ಲಿ ಕಂಡುಬರುವ ಪ್ರಸಂಗಗಳನ್ನು ಕಥೆಯಾಗಿ ಕಟ್ಟಿಕೊಡಲಾಗಿದೆ. ಇಲ್ಲಿ ಗಡಿನಾಡಿನ ಭಾಷೆ, ನುಡಿಗಟ್ಟು ಬಳಸಲಾಗಿದೆ. ಇಲ್ಲಿ ಬರುವ ಹತ್ತೂ ಕಥೆಗಳು ಭಿನ್ನ ವಿಭಿನ್ನ ಸನ್ನವೇಶಗಳನ್ನುಳ್ಳವು. ಹಾಗೆಂದು ಫ್ಯಾಂಟಸಿಯುಳ್ಳ ಕಥೆಗಳು ಇಲ್ಲವೆಂದಲ್ಲ; ಸೂರ್ಯ ಶಿಕಾರಿ ಮತ್ತು ರೈಟ್ ಬಂಡಿ ಕತೆಗಳು ಫ್ಯಾಂಟಸಿ ಸ್ವರೂಪದ್ದಾಗಿವೆ. ಉಳಿದ ಎಲ್ಲ ಕಥೆಗಳು ಮನರಂಜನೆಯೊಂದಿಗೆ ಮಕ್ಕಳ ಮನೋವಿಸ್ತಾರಕ್ಕೆ ಪೂರಕವಾಗಿವೆ. ಈ ಕೃತಿಗೆ ಡಾ. ಆನಂದ ಪಾಟೀಲರ ಮುನ್ನುಡಿ ಇದೆ.
ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...
READ MOREಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ 2011
ಚೆನ್ನಬಸವ ಪಟ್ಟದ್ದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ 2012