‘ಚಿನ್ನದ ಹುಡುಗಿ ಚಿನ್ನಮ್ಮ’ ಲೇಖಕ ಆರ್.ವಿ. ಭಂಡಾರಿ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ. ಈ ಕೃತಿಯ ಕುರಿತು ಬರೆಯುತ್ತಾ ಮಕ್ಕಳಿಗಾಗಿ ಬರೆದ ಚಿನ್ನದ ಹುಡುಗಿ ಚಿನ್ನಮ್ಮ ಕಾದಂಬರಿ ನನಗೆ ಅತ್ಯಂತ ಪ್ರಿಯವಾದುದು. ಚಿನ್ನಮ್ಮ ಅತ್ಯಂತ ಕೆಳ ಜಾತಿಯ ಬಡ ಹೆಣ್ಣು ಮಗಳು. ಬೇರೆಯವರ ಮನೆಕೆಲಸವನ್ನು ಮಾಡುತ್ತಿರುವುದರಿಂದ ಶಾಲೆಗೆ ಹೋಗಿ ಓದು-ಬರಹ ಕಲಿಯಲು ಸಾಧ್ಯ ಆಗದಿದ್ದರೂ ಮನೆಯಲ್ಲಿಯೇ ಸ್ವಪ್ರಯತ್ನದಿಂದ ಕಲಿತು, ನಂತರ ಶಾಲೆಗೆ ಸೇರಿ, ಕ್ರೀಡೆಯಲ್ಲಿ ಮಹತ್ತನ್ನು ಸಾಧಿಸಿ ಚಿನ್ನದ ಹುಡುಗಿ ಎಂಬ ಅಭಿದಾನಕ್ಕೆ ಪಾತ್ರವಾಗುವುದು ಮೆಚ್ಚಿಗೆಯ ಸಂಗತಿ ಎನ್ನುತ್ತಾರೆ ಲೇಖಕ ಆರ್.ವಿ. ಭಂಡಾರಿ. ಈ ಕಾದಂಬರಿ ಮಕ್ಕಳ ಮನಸ್ಸಿನಲ್ಲಿ ಸಾಧನೆಯ ಛಲ ಹುಟ್ಟಿಸಿ ಅವರ ಗಮ್ಯವನ್ನು ತಲುಪಲು ಸಹ ಕರಿಸುತ್ತದೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್ಚಂದ್ರ ...
READ MORE