ಮಕ್ಕಳ ಬೆಳವಣಿಗೆಗೆ ತಕ್ಕಂತೆ ಅಭಿರುಚಿಗಳು ಬದಲಾಗುತ್ತವೆ. ಬದಲಾದ ಅಭಿರುಚಿಗೆ ಬೇಕಾದ ಹಾಗೆ ಕತೆ ಹೆಣೆಯುವುದು ಸವಾಲಿನ ಕೆಲಸ. ಹೀಗೆ ಪ್ರೌಢಮಕ್ಕಳಿಗೆಂದೇ ಬರೆದ ಕತೆಗಳ ಸಂಕಲನ ’ಹೂ ಗುಚ್ಛ’. ಕತೆಗಳನ್ನು ಬುದ್ಧಿಗೆ ಕಸರತ್ತು ನೀಡುವಂತೆ ಮತ್ತು ಕುತೂಹಲಭರಿತವಾಗಿ ರಚಿಸಲಾಗಿದೆ. ಇವು ನಿಜ ಜೀವನಕ್ಕೆ ಹತ್ತಿರವಿರುವುದರಿಂದ ಮಕ್ಕಳನ್ನು ಸುಲಭವಾಗಿ ಸೆಳೆಯಬಲ್ಲವು.
ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು. ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...
READ MORE