ಮಕ್ಕಳಿಗಾಗಿ ಕಾಡಿನ ಕಥೆಗಳು-ಲೇಖಕ ಮತ್ತೂರು ಸುಬ್ಬಣ್ಣ ರಚಿಸಿದ ಕೃತಿ ಇದು. ಕಾಡು, ಪಕ್ಷಿ ಪ್ರಾಣಿ, ನೀರು, ಕಂದಕ, ಹೊಂಡ ಇವೆಲ್ಲವೂ ಮಕ್ಕಳು ಮಾತ್ರವಲ್ಲ; ದೊಡ್ಡವರಿಗೂ ಪ್ರಿಯವಾಗುತ್ತವೆ. ಕಾಡು-ಪ್ರಾಣಿ-ಪಕ್ಷಿ-ನೀರು ಹೀಗೆ ವಿವಿಧ ಜೀವನ ಶೈಲಿ ಹೊಂದಿದ್ದರೂ ಕಾಡಿನಲ್ಲಿ ಅವುಗಳ ಹೊಂದಾಣಿಕೆಯ ಬದುಕು ಮಾದರಿ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಮಾತ್ರ ಬೇಟೆಯಾಡುತ್ತವೆ. ಹೊಟ್ಟೆ ತುಂಬಿದ ಮೇಲೆ ಅವು ಮತ್ತೊಂದು ಪ್ರಾಣಿಯ ಬದುಕಿನೊಂದಿಗೆ ಚೆಲ್ಲಾಟವಾಡುವುದಿಲ್ಲ. ಇಂತಹ ಸಂದೇಶದ ಕತೆಗಳು ಈ ಕಥೆಯ ಹಂದರವಾಗಿದೆ. ಆದ್ದರಿಂದ, ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಕೃತಿಯ ಕರ್ತೃ ಮತ್ತೂರು ಸುಬ್ಬಣ್ಣ.
ಮಕ್ಕಳ ಕತೆ, ಕವನ, ನಾಟಕ ರಚನೆಯಲ್ಲಿ ಹೆಸರಾಗಿರುವ ಮತ್ತೂರು ಸುಬ್ಬಣ್ಣ ಎಂತಲೇ ಪರಿಚಿತರಾಗಿರುವವರು ಹೊಸಹಳ್ಳಿ ಬಾಲಸುಬ್ರಹ್ಮಣ್ಯ. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಇವರು ಮಕ್ಕಳ ಕತೆ ಹೇಳುವುದರಲ್ಲಿಯೂ ಸಿದ್ಧರು. ಮಾಡಿದ್ದುಣ್ಣೋ ಮಾಮಣ್ಣ, ಒಂದು ಕುರಿಯ ಕತೆ, ಅಂಶು ಮತ್ತು ರಾಬೊಟ್, ಸಮಯಪ್ರಜ್ಞೆ, ಕಾಡಿನ ಕತೆಗಳು, ಕುಮಾ ಮತ್ತು ಇತರ ಮಕ್ಕಳ ಕತೆಗಳು, ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ, ವಿಚಿತ್ರ ಸಲಹೆ, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ ಭಾಗ-1, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ-೧, ಹಣ್ಣಿನ ಕಳ್ಳ ...
READ MORE