‘ಹಿತೋಪದೇಶ’ ಮಕ್ಕಳಿಗಾಗಿ ಕುನ್ವರ್ ಅನಿಲ್ ಕುಮಾರ್ ಅವರ ಇಂಗ್ಲಿಷ್ ಕೃತಿಯನ್ನು ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ವಿಶೇಷ ಚಿತ್ರಗಳೊಂದಿಗೆ ಚುರುಕಾದ ರೀತಿಗಳನ್ನು, ಚತುರ ಆಲೋಚನೆ ಮತ್ತು ಯಶಸ್ಸಿನ ಹೆಜ್ಜೆಗಳನ್ನು ಕಲಿಸುವ ಪ್ರಾಚೀನ ಕಾಲದ ಪ್ರಾಣಿಗಳ ಕತೆಯನ್ನು ನೀಡಲಾಗಿದೆ. ಮಕ್ಕಳ ಮನೋವಿಕಾಸಕ್ಕೆ ಮತ್ತು ಕಲ್ಪನಾ ಸಾಮರ್ಥ್ಯಕ್ಕೆ ಕತೆಗಳ ಕೊಡುಗೆ ಅಪಾರ. ಹಾಗಾಗಿ ವಸಂತ ಪ್ರಕಾಶನ ಬಾಲ ಸಾಹಿತ್ಯದ ಹಲವು ಮಾಲಿಕೆಗಳನ್ನು ಹೊರತಂದು ಪ್ರಪಂಚದ ವಿಭಿನ್ನ ಕತೆಗಳನ್ನು ಕನ್ನಡದ ಓದುಗರಿಗೆ ತಲುಪಿಸಿದೆ. ಅದರ ಭಾಗವಾಗಿ ಪ್ರಕಟವಾದ ಕೃತಿ- ಹಿತೋಪದೇಶ.
ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಸಮಾನ ಆಸಕ್ತಿ ಇರುವ ಗೋಪಾಲ ಕೃಷ್ಣ ಮಧ್ಯಸ್ಥ (ಜಿ.ಕೆ. ಮಧ್ಯಸ್ಥ) ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪತ್ರಿಕೆಗಳ ಭಾಷೆಯ ಬಳಕೆ ಮತ್ತು ಬದಲಾವಣೆಯನ್ನು ವಿಶ್ಲೇಷಣೆ ಮಾಡುತ್ತಾರೆ. ನಿವೃತ್ತಿಯ ನಂತರ ಉಡುಪಿಯಲ್ಲಿ ನೆಲೆಸಿರುವ ಅವರು ‘ದುಡ್ಡು ಕಾಸು', 'ಪದೋನ್ನತಿ' ಎಂಬ ಎರಡು ಅಂಕಣ ಬರಹಗಳನ್ನು ಪುಸ್ತಕಗಳಾಗಿ ಪ್ರಕಟಿಸಿದ್ದಾರೆ. ಗೋಪಾಲಕೃಷ್ಣ ಮಧ್ಯಸ್ಥ ಜನಿಸಿದ್ದು ಕಾಸರಗೋಡು ಸಮೀಪದ ಕುಂಜ್ಯಾರುವಿನಲ್ಲಿ. ...
READ MORE