ಸರಳ ಮತ್ತು ರುಚಿಕಟ್ಟಾದ ಕಥೆ ಹೇಳುವ ಶೈಲಿಯಿಂದ ಮಕ್ಕಳು ವಂಚಿತರಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ , ಮಕ್ಕಳ ಸಮಗ್ರ ವಿಕಸನವನ್ನು ಗಮನದಲ್ಲಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ. ತನ್ನ ಒಡಲೊಳಗಿನ ಇಪ್ಪತ್ತೈದು ಕಥಾರತ್ನಗಳನ್ನು ಈ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಸಮರ್ಪಿಸಲಾಗಿವೆ. ತಮ್ಮ ಕಥೆಗಳ ಮೂಲಕ, ಕಳೆದುಹೋಗುತ್ತಿರುವ ಕೌಟುಂಬಿಕ ಸೌಂದರ್ಯವನ್ನು ಈಗಿನ ಮಕ್ಕಳಿಗೆ ಮರುಕಳಿಸುವ ಲೇಖಕ “ಕಂಚ್ಯಾಣಿ ಶರಣಪ್ಪ”ನವರ ಪ್ರಯತ್ನ ಈ ಕೃತಿಯಲ್ಲಿ ಅಡಗಿದೆ.
ಶಿಶು ಸಾಹಿತ್ಯದ ಕಣ್ಮಣಿ ಎಂದೇ ಖ್ಯಾತಿಯ ಕಂಚ್ಯಾಣಿ ಶರಣಪ್ಪನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದಲ್ಲಿ. ತಂದೆ ಶಿವ ಸಂಗಪ್ಪ, ತಾಯಿ ರುದ್ರಮ್ಮ. ನಾಲ್ಕಾರು ಊರು ಸುತ್ತಾಡಿ ಓದಿದ್ದು ಏಳನೇ ತರಗತಿಯವರೆಗೆ. ಪ್ರಾಥಮಿಕ ಶಾಲಾ ಶಿಕ್ಷಕರಾದ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 39 ವರ್ಷ ದೀರ್ಘ ಕಾಲ ಬೋಧಿಸಿ, 1988 ರಲ್ಲಿ ನಿವೃತ್ತರಾದರು.. ಮಕ್ಕಳ ಮನೋಧರ್ಮವನ್ನರಿತು, ಅವರ ಮನೋವಿಕಾಸಕ್ಕೆ ತಕ್ಕಂತಹ ರಮ್ಯವಾದ ಪದಗಳನ್ನು ರಚಿಸಿ, ಹಾಡುತ್ತ, ಕುಣಿಯುತ್ತ, ಕಲಿಯುವಂತಾಗುವಂತಹ ಗೀತೆಗಳನ್ನು ರಚಿಸತೊಡಗಿದರು. ಹಳ್ಳಿಗಾಡಿನ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿನಃ ಬೇರೆ ರೀತಿಯ ಪುಸ್ತಕಗಳು ದೊರೆಯುತ್ತಿಲ್ಲವೆಂಬ ಅಂಶವನ್ನು ಮನಗಂಡು ತಾವು ಬರೆದ ...
READ MORE