ಪಂಜೆ ಮಂಗೇಶರಾಯರು ಮಕ್ಕಳ ಸಾಹಿತ್ಯದ ಆದ್ಯ ಪುರುಷರು. ಅವರು ಮಕ್ಕಳ ಕಥೆಗಳನ್ನು ರಚಿಸಿ ಸರಿಸುಮಾರು ನೂರು ವರ್ಷಗಳಾಗಿದ್ದರೂ ಇಂದಿಗೂ ಅವುಗಳ ತಾಜಾತನ ಮಾಸಿಲ್ಲ. ಕನ್ನಡದಲ್ಲಿ ಮಕ್ಕಳ ಪದ್ಯಗಳನ್ನು ಬರೆಯಲು ಯಾರೂ ಸಾಹಸ ಮಾಡದೇ ಇದ್ದಾಗ, ಪಂಜೆಯವರು ಆ ಕೆಲಸದಲ್ಲಿ ತೊಡಗಿ ಯಶಸ್ವಿಯಾದರು. ಅವರ ಮಕ್ಕಳ ಕಥೆಗಳು ಅನೇಕ ವರ್ಷಗಳ ಕಾಲ ಮಕ್ಕಳ ಪಠ್ಯದಲ್ಲಿ ಸೇರಿದ್ದವು. ಹಿಂದಿನ ತಲೆಮಾರಿನವರಂತೂ ಪಂಜೆಯವರ ಕಥೆಗಳನ್ನು ಓದಿಕೊಂಡೇ ಬೆಳೆದವರು.
ಪಂಜೆಯವರೀಗ ನಿಧಾನವಾಗಿ ಜನರ ವಿಸ್ಕೃತಿಗೆ ಒಳಗಾಗಿದ್ದಾರೆ. ಜನರು ನಿಧಾನವಾಗಿ ಅವರನ್ನು ಮರೆಯಲು ತೊಡಗಿದ್ದಾರೆ. ಹಾಗೆ ಆಗಬಾರದೆಂಬುದೇ ಪ್ರಕಾಶಕರ ಆಶಯ. ಅದೇ ಕಾರಕ್ಕಾಗಿ ಪಂಜೆಯವರ ಮಕ್ಕಳ ಪದ್ಯಗಳು ಮತ್ತು ಮಕ್ಕಳ ಕಥೆಗಳನ್ನು ಅಂಕಿತ ಪ್ರಕಾಶನ ಮರುಮುದ್ರಣ ಮಾಡಿದೆ. ಪಂಜೆಯವರು ಮತ್ತಷ್ಟು ಕಾಲ ಜನರ ಮನಸ್ಸಿನಲ್ಲಿ ಉಳಿಯಬೇಕೆಂಬುದು ಈ ಕೃತಿಯ ಆಶಯ.
ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 1874 ಫೆಬ್ರುವರಿ 22 ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಹೆಸರುಗಳಲ್ಲಿ ಬರಹಗಳನ್ನು ರಚಿಸಿದ್ದರು. ಇವರು ಬರೆದ ಹುತ್ತರಿ ಹಾಡು ಕೊಡಗಿನ ನಾಡಗೀತೆಯಾಯಿತು. ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಇವರು ಬಾಲ ಸಾಹಿತ್ಯಮಂಡಲ ಸಂಸ್ಥೆಯನ್ನು ರಚಿಸಿ ಬಾಲಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದರು. ಮಂಗೇಶರಾಯರ ಪ್ರಮುಖ ಕೃತಿಗಳೆಂದರೆ ಪಂಚಕಜ್ಜಾಯ, ತೂಗುವ ತೊಟ್ಟಿಲು, ...
READ MORE