ಡಾ. ಚಂದ್ರಶೇಖರ ಕಂಬಾರ ಅವರು ಮಕ್ಕಳಿಗಾಗಿ ಬರೆದ ಜಾನಪದ ಕಥೆಗಳ ಸಂಕಲನವಿದು. ಮಕ್ಕಳಿಗೆ ಕಥೆಗಳು ಹೇಳುವುದು, ಕೇಳುವುದು ಎರಡೂ ಅವರ ಮನೋವಿಕಾಸಕ್ಕೆ ಪೂರಕವಾದವುಗಳೇ. ಕಥೆಗಳಿಂದ ಅವರ ಕಲ್ಪನಾ ಶಕ್ತಿ ಹೆಚ್ಚುತ್ತದೆ. ವೈಚಾರಿಕ-ಭಾವನಾತ್ಮಕ ವಿಸ್ತಾರ ಹಾಗೂ ಆಳ ಪಡೆಯುತ್ತದೆ. ಅದಕ್ಕೆಂದೇ ನಮ್ಮ ಜಾನಪದರು ಮಕ್ಕಳಿಗಾಗಿ ಕಥೆಗಳುನ್ನು ರಚಿಸಿದ್ದಾರೆ. ಅವುಗಳು ಹೆಚ್ಚಾಗಿ ಅಜ್ಜಿ ಕಥೆಗಳು ಸೇರಿವೆ. ಇಂತಹ ಕಥೆಗಳನ್ನು ಆಯ್ದು ಸಂಗ್ರಹಿಸಿ ಸಂಪಾದಿಸಿದ ಕೃತಿ ಇದು. ಮಕ್ಕಳಿಗೆ ಇಂತಹ ಕಥೆಗಳು ಬದುಕಿನ ಸಕಾರಾತ್ಮಕ ಪ್ರೇರಣೆಗಳನ್ನು ನೀಡುತ್ತವೆ.
ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ...
READ MORE