ಲೇಖಕ ವಿರೂಪಾಕ್ಷ ಕೋರಗಲ್ ಅವರ ಮಕ್ಕಳ ಕಥಾ ಸಂಕಲನ ಕೃತಿ ʻಸಿಂಬಳ ಬುರುಕನ ಕಥೆಗಳುʼ. ಕನ್ನಡ ವಾರಪತ್ರಿಕೆಯಲ್ಲಿ ಪ್ರಕಟವಾದ ನಾಲ್ಕು ಕತೆಗಳು ಹಾಗೂ ಹೊಸದಾಗಿ ರಚಿಸಿದ ಹದಿನಾರು ಕತೆಗಳನ್ನು ಈ ಪುಸ್ತಕ ಒಳಗೊಂಡಿದೆ. ಇಲ್ಲಿರುವ ಕತೆಗಳ ಕಥಾವಸ್ತುಗಳು ವಿವಿಧ ನೆಲೆಗಳಿಂದ ಆರಿಸಲಾಗಿದ್ದು, ಕತೆಗೆ ತಕ್ಕಂಥ ಚಿತ್ರಗಳನ್ನೂ ಬಳಸಲಾಗಿದೆ. ಪುಸ್ತಕದ ಪರಿವಿಡಿಯಲ್ಲಿ ದುರಾಶೆಯ ಫಲ, ಮಾತಾಡುವ ಚಿನ್ನ, ಹುಲಿಯ ಕೈಗೆ ಬಳೆ, ಪ್ರೀತೆಯೆಂಬ ಚುಂಬಕ, ಸತ್ಯ ಹುಡುಕುತ್ತಿರುವ ಸಿರಿವಂತರು, ವನದ ವೈದ್ಯರು, ಅನ್ನದೇವರು, ಓದು ಬಂಗಾರ ಬುದ್ದಿಗೆ ಸಿಂಗಾರ ಮುಂತಾದ ಶೀರ್ಷಿಕೆಗಳ ಕತೆಗಳಿವೆ.
ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ. ಕೃತಿಗಳು: ಮುತ್ತಿನ ಚಿಪ್ಪಿನ ಸೂತ್ರಗಳು, ಭೂ ಅಳತೆಯಕ್ಷೇತ್ರ ಗಣಿತ, ಕಾವೇರಿಯಿಂದ ಗೋದಾವರಿವರೆಗೆ, ರಾಜಾದಿತ್ಯ, ನಾಯಿ ...
READ MORE