ಅಪಾಯ ಬಂದಾಗ ತನಗೆ ತಾನೇ ಸುತ್ತಿಕೊಳ್ಳುವ ಚಿಪ್ಪುಹಂದಿ ಹಂದಿ ವಂಶಕ್ಕೆ ಸೇರಿದಲ್ಲ. ದೇಹದಷ್ಟೇ ಉದ್ದದ ನಾಲಗೆ ಹೊಂದಿರುವ ಈ ಪ್ರಾಣಿಯ ಮೈತುಂಬಾ ಚಿಪ್ಪು ಆವೃತ್ತವಾಗಿರುವುದರಿಂದ ಇದಕ್ಕೆ ಚಿಪ್ಪು ಹಂದಿ ಎಂಬ ಹೆಸರಿದೆ. ಈ ಪ್ರಾಣಿಯ ಕುರಿತು ವಿಶೇಷ ಮಾಹಿತಿ ತಿಳಿದುಕೊಳ್ಳಲು ಚಿಪ್ಪೂ ಪುಟ್ಟನ ಚಮತ್ಕಾರ ಪುಸ್ತಕವನ್ನು ಓದಲೇಬೇಕು. ಲೇಖಕರು ಕಥೆಯ ರೂಪದಲ್ಲಿ ಚಿಪ್ಪು ಹಂದಿಯ ಕುರಿತು ವಿವರಣೆ ನೀಡಿರುವುದು ವಿಭಿನ್ನವಾಗಿದೆ. ಪೋ ಎಂಬ ಚಿಪ್ಪೂ ಪುಟ್ಟ ರಾತ್ರಿ ಸಮಯದಲ್ಲಿ ಆಹಾರ ಹುಡುಕುತ್ತಾ ಹೊರಟಾಗ ಎದುರಾಗುವ ಸಮಸ್ಯೆಯಿಂದ ಹೇಗೆ ಪಾರಾಯಿತು ಎಂಬುದನ್ನು ತಿಳಿಯಲು ನೀವು ಓದಿ ಚಿಪ್ಪೂ ಪುಟ್ಟನ ಚಮತ್ಕಾರ
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE