ಸಾಹಿತ್ಯವನ್ನು ಮಕ್ಕಳಿಗೆ ತಲುಪಿಸುವುದು ಹೇಗೆ ಎಂಬ ಚರ್ಚೆ ಆಗಾಗ ವಿದ್ವತ್ ವಲಯದಲ್ಲಿ ನಡೆಯುತ್ತಲೇ ಇರುತ್ತದೆ. ಹತ್ತನೇ ಶತಮಾನದ ಕನ್ನಡದ ಮಹತ್ವದ ಕವಿಯೊಬ್ಬ ಈಗಿನ ಕಾಲದ ಮಕ್ಕಳ ಬಾಯಲ್ಲಿ ನಲಿದರೆ ಅದಕ್ಕಿಂತಲೂ ದೊಡ್ಡ ಸಾಧನೆ ಮತ್ತೊಂದು ಇರುವುದಿಲ್ಲ.
’ಮಕ್ಕಳಿಗಾಗಿ ಪಂಪ’ ಕವಿ ಹಾಗೆ ಸಾಹಿತ್ಯವನ್ನು ಮಕ್ಕಳಿಗೆ ಸಲೀಸಾಗಿ ತಲುಪಿಸುವ ಯತ್ನ.
ಸರಳ ಕನ್ನಡದಲ್ಲಿ ರಂಜನಾತ್ಮಕವಾಗಿ ಪಂಪನ ಕತೆಯನ್ನು ಇಲ್ಲಿ ಹೇಳಲಾಗಿದೆ. ಇದೊಂದು ರೀತಿ ಎಚ್ಎಸ್ವಿ ಅಜ್ಜ ಪುಟಾಣಿಗಳಿಗಾಗಿ ನೀಡಿದ ಉಡುಗೊರೆ ಎನ್ನಬಹುದು.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE