ಲೇಖಕ ಗಣೇಶ ಪಿ. ನಾಡೋರ ಅವರ ಕೃತಿ-ಹಾರುವ ಬಯಕೆ. ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಕಥೆ ಕೇಳುತ್ತಲೇ ಮಕ್ಕಳು ನೂರೆಂಟು ಪ್ರಶ್ನೆಗಳನ್ನು ಎಸೆಯುತ್ತಾರೆ. ಮಕ್ಕಳು ಜಾಣರೂ ಸೂಕ್ಷ್ಮಮತಿಗಳೂ ಆಗಿರುತ್ತಾರೆ. ಇಲ್ಲಿಯ ಕಥೆಗಳು ಹಳ್ಳಿಯ ಜನಜೀವನ, ದಾರುಣ ಬಡತನ, ಕಪಟವರಿಯದ ಮುಗ್ಧ ಸ್ವಭಾವಗಳನ್ನು ಪರಿಚಯಿಸುತ್ತದೆ. ನಗರ ಜೀವನ ಮತ್ತು ಹಳ್ಳಿಯ ಬದುಕು ಹೀಗೆ ಮಕ್ಕಳ್ಳೆಲ್ಲ ಎಲ್ಲಿದ್ದರೂ ಸಮಾನ ಕುತೂಹಲಿಗಳು. ಉತ್ಸಾಹದಲ್ಲಿ ಯಾರು ಹಿಂದಿಲ್ಲವೆಂದು ಈ ಕಥೆಗಳು ಹೇಳುತ್ತಿವೆ. ಅವಕಾಶ - ಪ್ರೋತ್ಸಾಹ ಎಲ್ಲ ಮಕ್ಕಳಿಗೂ ಸಿಕ್ಕಲ್ಲಿ ಭೇದಭಾವ ಇಲ್ಲ ಎಂಬ ಸಂದೇಶ ಈ ಕಥೆಗಳಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಹುಟ್ಟಿದ್ದು: 23 ಡಿಸೆಂಬರ್ 1969. ತಂದೆ ಆರ್. ಪಲವೇಸಮುತ್ತು ನಾಡಾರ್ ತಮಿಳುನಾಡಿನ ಚೆಟ್ಟಿಕುಳಂ ಮೂಲದವರು. ತಾಯಿ ಮಹಾದೇವಿ ಹರಿಕಂತ್ರ ನಾಡಾರ್ ಗೋಕರ್ಣ ಸಮೀಪದ ತೊರೆಗಜನಿಯವರು. ಇಲ್ಲಿಯವರೆಗೆ ಮಕ್ಕಳಿಗಾಗಿ 15 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 'ಬೆಳ್ಳಕ್ಕಿ ಮತ್ತು ಬುಲ್ ಬುಲ್', 'ನೆಗೆತ', 'ಕರಿಮುಖ' 'ಆಟ' ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ, ಸಂಧ್ಯಾ ಸಾಹಿತ್ಯ ವೇದಿಕೆಯ ಮೇವುಂಡಿ ಮಲ್ಲಾರಿ ವಿಶೇಷ ಪುರಸ್ಕಾರ, ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಸಂದಿವೆ. ಜೀವನೋಪಾಯ ಕ್ಕಾಗಿ ಹೈದರಾಬಾದಿನ ...
READ MORE