ಜೀವಿಪ್ರಪಂಚ ಬಲು ರೋಚಕವಾದ ಜಗತ್ತು. ಇಲ್ಲಿರುವ ಪ್ರತಿಯೊಂದು ಜೀವಿಯೂ ಬದುಕಿ ಉಳಿಯಲೆಂದೇ ನಿತ್ಯ ಸಾಹಸ ಪಡುತ್ತಿರುತ್ತದೆ ಎನ್ನುತ್ತದೆ ಲೇಖಕ ಕೊಳ್ಳೇಗಾಲ ಶರ್ಮ ಅವರ ‘ಗುಬ್ಬಿಯ ಬ್ರಹ್ಮಾಸ್ತ್ರ’. ನಮಗೆ ಸಾಮಾನ್ಯ ಎನ್ನಿಸುವ ವಿಷಯಗಳು ಹಲವು ಅಸಾಮಾನ್ಯ ರೀತಿಯವು ಎನ್ನುತ್ತದೆ ಈ ಕೃತಿ. ಆಹಾರಕ್ಕಾಗಿ, ಸ್ಪರ್ಧೆಗಾಗಿ, ಕುಟುಂಬದ ರಕ್ಷಣೆಗಾಗಿ, ವೈರಿಗಳನ್ನು ಬೆದರಿಸಲು, ಬೇಟೆಗಳನ್ನು ಹಿಡಿಯಲು- ಹೀಗೆ ಹತ್ತು ಹಲವು ಕಾರ್ಯಗಳಿಗೆಂದು ವಿವಿಧ ಬಗೆಯ ಉಪಾಯಗಳನ್ನು ಜೀವಿಗಳು ಬಳಸುತ್ತವೆ. ಒಂದು ವೇಳೆ ಅವುಗಳನ್ನು ನಾವು ಮನುಷ್ಯರು ಬಳಸುತ್ತಿದ್ದಿದ್ದರೆ ಅದು ಮಹಾಸಾಹಸ ಎನ್ನಿಸಿಬಿಡುತ್ತಿತ್ತು. ಸಾಧನೆ ಎಂದು ಸನ್ಮಾನ ಪಡೆಯುತ್ತಿತ್ತು. ಅಂತಹ ನಿತ್ಯ ಬದುಕಿನ ಸಾಧನೆ, ಸಾಹಸಗಳನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ರಾಕ್ಷಸರ ಬಡಿಗೆಯ ನಡುವಿನ ಬದುಕು, ಕುಂಡಿಯಲ್ಲೊಂದು ಬಾಂಬು, ಗರುಡ ಗೆದ್ದಲು, ನಾಲಗೆ ದಾಸ, ರೋಮಬಾಣ, ದಾರದ ಸರದಾರ, ಗುದ್ದಲಿ ಕೊಂಬು, ವಿಷದ ಉಗುಳು, ಭದ್ರ ಶಿರ ಕತೆಗಳನ್ನು ಈ ಕೃತಿಯು ಒಳಗೊಂಡಿದೆ.
ಕೊಳ್ಳೇಗಾಲ ಶರ್ಮ ಅವರು ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಪ್ರಚಾರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಕನ್ಅಂನಡಪ್ಕರಭ ಪತ್ಣರಿಕೆಯಲ್ಲಿ ಅಂಕಣಕಾರರು. ಕನ್ನಡ ವಿಶ್ವವಿದ್ಯಾಲಯ (ಹಂಪಿ) ವಿಜ್ಞಾನ ಸಂಗಾತಿಯ ಗೌರವ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ‘ಸೈನ್ಸ್ ರಿಪೋರ್ಟರ್’ ಸಂಪಾದಕರೂ ಹೌದು. 'ಮರಳ ಮೇಲಿನ ಹೆಜ್ಜೆಗಳು', 'ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು' ಕೃತಿಗಳನ್ನು ಬರೆದಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಗೌರವ ಲಭಿಸಿದೆ. ...
READ MORE