ಖ್ಯಾತ ಲೇಖಕಿ ಡಾ. ಸುಧಾಮೂರ್ತಿ ಅವರು ಮಕ್ಕಳಿಗಾಗಿ ಬರೆದ ಕೃತಿ ‘ನನ್ನ ಮೆಚ್ಚಿನ ಕಥೆಗಳು’. ಮಕ್ಕಳಿಗೆ ಕಥೆಗಳೆಂದರೆ ಅಚ್ಚುಮೆಚ್ಚು. ಅವು ಕಥೆಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತವೆ ಮತ್ತು ಪ್ರತಿಕ್ರಿಯಿಸುತ್ತವೆ. ಅವರ ಮನೋವಿಕಾಸಕ್ಕೂ ಕಥೆಗಳು ಪೂರಕವಾಗುತ್ತವೆ. ಅವರ ವ್ಯಕ್ತಿತ್ವವನ್ನೂ ಗಟ್ಟಿಗೊಳಿಸುತ್ತವೆ. ಆದ್ದರಿಂಧ, ಮಕ್ಕಳ ಕಲ್ಪನಾ ಸೌಂದರ್ಯ, ವಿಸ್ತಾರ ಹಾಗೂ ಆಳವನ್ನು ಹೆಚ್ಚಿಸಲು ಕಥೆಗಳು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಲೇಖಕಿಯು ತಮಗೆ ಇಷ್ಟವಾದ ಕಥೆಗಳನ್ನು ಮಕ್ಕಳಿಗಾಗಿ ಸಂಗ್ರಹಿಸಿದ್ದೇ ಈ ಕೃತಿ. ಮಕ್ಕಳಿಗೆ ಇದು ಪ್ರೇರಣಾತ್ಮಕ ಕೃತಿಯೂ ಆಗಿದೆ.
ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸುಧಾ ಮೂರ್ತಿ ಅವರಿಗೆ ರೋಟರಿ ...
READ MORE