ಮಕ್ಕಳ ಮನೋವಿಕಾಸಕ್ಕೆ ಹಾಗೂ ಮನರಂಜನೆಗಾಗಿ ಬರೆದ ಸಣ್ಣ ಸಣ್ಣ ಕಥೆಗಳ ಸಂಕಲನವಿದು-ಗುಲಗಂಜಿ. ಲೇಖಕ ಜೆ.ಪಿ.ರಾಜರತ್ನಂ ಅವರು ಈಗಾಗಲೇ ಕಡಲೆಪುರಿ, ತತ್ತೂರಿ, ಚುಟಕ ಇತ್ಯಾದಿ ಮಕ್ಕಳಿಗಾಗಿ ಬರೆದ ಕೃತಿಗಳ ಮುಂದುವರಿದ ಭಾಗವಾಗಿ ಇಲ್ಲಿಯ ಕಥೆಗಳಿವೆ. ಸಣ್ಣ ಸಣ್ಣ ಕಥೆಗಳ ಮೂಲಕ ಮಕ್ಕಳ ಓದು ಆಸಕ್ತಿ ಹುಟ್ಟಿಸಬೇಕು. ಮನರಂಜಿಸಬೇಕು ಹಾಗೂ ಪರಿಣಾಮಕಾರಿಯಾಗಿಸಬೇಕು ಎಂಬುದು ಇದರ ಹಿಂದಿನ ಉದ್ದೇಶ.
ಗದ್ಯ ಬೇಜಾರಾದರೆ ಪದ್ಯ ಓದು, ಪದ್ಯ ಬೇಜಾರಾದರೆ ಗದ್ಯ ಓದು. ಎರಡೂ ಬೇಜಾರಾದರೆ ಪುಸ್ತಕ ಮುಚ್ಚಿ ಇಡು. ಆಡುವುದಕ್ಕೆ ಓಡು ಎಂದು ಪ್ರಸ್ತಾವನೆಯಲ್ಲಿ ಲೇಖಕರು ಬರೆಯುವ ಮೂಲಕ ಮಕ್ಕಳಿಗೆ ಓದು-ಬರೆಹ ಮಾತ್ರ ಮುಖ್ಯವಲ್ಲ; ಆಟವೂ ಸಹ ಎಂದು ಎಚ್ಚರಿಸಿದ್ದಾರೆ. ಮಕ್ಕಳಿಗೆ ಇಲ್ಲಿಯ 12 ಕಥೆಗಳು ಅಪ್ಯಾಯಮಾನವಾಗಿವೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE