ಲೇಖಕ ವಿರೂಪಾಕ್ಷ ಕೋರಗಲ್ ಅವರ ಮಕ್ಕಳ ಸಾಹಿತ್ಯ ಕೃತಿ ʻಗುಜು ಗುಜು ಮಾಪುರಿʼ. ಶಿಲಾಯುಗದಿಂದ ಈಗಿನ ಸ್ಪುಟ್ನಿಕ್ ಯುಗದ ವರೆಗೆ ಮನುಷ್ಯ ಹೇಗೆ ಹೊಸ ಹೊಸ ವಾಹನಗಳನ್ನು ಸಂಶೋಧಿಸಿಕೊಂಡು ಬಂದನೆನ್ನುವ ವಿಚಾರಗಳನ್ನು ಪುಸ್ತಕ ಹೊಂದಿದೆ. ತನ್ನ ಅನುಕೂಲಕ್ಕಾಗಿ ವಾಹನಗಳನ್ನು ಕಂಡು ಹಿಡಿದರೂ ಬರು ಬರುತ್ತಾ ಮಾನವ ರಹಿತ ಕೊಲ್ಲುವ, ನಾಶ ಮಾಡುವ ಯಂತ್ರಗಳ ಆವಿಷ್ಕಾರಗೊಂಡವು. ಇಂಥ ವಾಹನಗಳು ನಮಗೆ ಬೇಡವೆನ್ನುವ ಸಂದೇಶವೂ ಈ ಕೃತಿಯಲ್ಲಿದೆ. ಇಲ್ಲಿನ ಪದ್ಯಗಳನ್ನು ಮಕ್ಕಳಿಗಾಗಿ ತಯಾರಿಸಲಾಗಿದ್ದು, ಆ ಮೂಲಕ ಅವರಿಗೆ ಮನರಂಜನೆ ನೀಡುತ್ತಾ ಹಲವಾರು ವಿಚಾರಗಳನ್ನು ಗಮನಕ್ಕೆ ತರುವ, ಅರ್ಥಮಾಡಿಸುವ ಕೆಲಸ ಇಲ್ಲಿ ನಡೆದಿದೆ.
ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ. ಕೃತಿಗಳು: ಮುತ್ತಿನ ಚಿಪ್ಪಿನ ಸೂತ್ರಗಳು, ಭೂ ಅಳತೆಯಕ್ಷೇತ್ರ ಗಣಿತ, ಕಾವೇರಿಯಿಂದ ಗೋದಾವರಿವರೆಗೆ, ರಾಜಾದಿತ್ಯ, ನಾಯಿ ...
READ MORE