ಹಿರಿಯ ಲೇಖಕಿ ವೀಣಾ ಬನ್ನಂಜೆ ಅವರ ಕೃತಿ-ಅಥರ್ವ ವೇದ. ಮಹಾಭಾರತ, ರಾಮಾಯಣ ಸೇರಿದಂತೆ, ಸನಾತನ ಪರಂಪರೆ, ಪೌರಾಣಿಕ ವಿಷಯ ವಸ್ತುಗಳನ್ನು ಒಳಗೋಂಡ ಸಣ್ಣ ಸಣ್ಣ ಕಥೆಗಳನ್ನು ಮಕ್ಕಳಿಗಾಗಿ ಬರೆದ ಕೃತಿ ಇದು. ಇಂದಿನ ಶಿಕ್ಷಣವು ನೈತಿಕ ಶಿಕ್ಷಣದಿಂದ ದೂರವಾಗುತ್ತಿದೆ. ನೈತಿಕ ಶಿಕ್ಷಣ ಎಂಬುದಕ್ಕೆ ಸಮಯಾವಕಾಶವೇ ನೀಡುತ್ತಿಲ್ಲ. ನೈತಿಕ ಶಿಕ್ಷಣಕ್ಕೆ ಸಮಯ ನೀಡುವುದು ವ್ಯರ್ಥ್ಯ ಎಂಬ ಭಾವನೆ ಬಲಗೊಳ್ಳುತ್ತಿದೆ. ಆದರೆ, ನೈತಿಕ ಶಿಕ್ಷಣ ನೀಡಿದ್ದರಿಂದ ವರ್ತಮಾನದಲ್ಲಿ ಇದರ ದುಷ್ಪರಿಣಾಮ ಕಾಣದು. ಆದರೆ, ಭವಿಷ್ಯದಲ್ಲಿ ಇದರ ಪರಿಣಾಮ ಸ್ಪಷ್ಟವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಈಎಚ್ಚರಿಕೆಯ ಹಿನ್ನೆಲೆಯಲ್ಲಿ ಲೇಖಕಿಯ ಈ ಕೃತಿ ಮಕ್ಕಳ ಗಮನ ಸೆಳೆಯುತ್ತದೆ ಮಾತ್ರವಲ್ಲ’; ವಯಸ್ಕರೂ ಸಹ ಓದಬೇಕಾದ ಪುಸ್ತಕವಿದು.
ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...
READ MORE