ತಮ್ಮಣ್ಣ ಬೀಗಾರ ಅವರ ‘ ಜಿಂಕೆ ಮರಿ’ ಕೃತಿಯು ಮಕ್ಕಳ ಕಥಾ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಶ್ರೀನಿವಾಸ ಉಡುಪ ಅವರು, ಕನ್ನಡದಲ್ಲಿ ಮಕ್ಕಳಿಗಾಗಿ ಬರೆಯುತ್ತಿರುವ ಹೊಸ ತಲೆಮಾರಿನ ಲೇಖಕರಲ್ಲಿ ತಮ್ಮಲ್ಲಿ ಬೀಗಾರ ಗಮನಸೆಳೆಯುವಂಥವರು. ಎಳೆಯರ ಸಹವಾಸದಲ್ಲಿಯೇ ಸದಾ ಇರಬೇಕಾಗಿರುವ ಶಿಕ್ಷಕ ವೃತ್ತಿ ಅವರದು, ಮೃದು ಮಾತಿನ, ಸಂಕೋಚ ಸ್ವಭಾವದ ತಮ್ಮಣ್ಣ ತಮ್ಮ ಎದೆಯಲ್ಲಿ ಮಗುತನವನ್ನು ಜಿತನದಿಂದ ಕಾಪಾಡಿಕೊಂಡು ಬಂದಿದ್ದಾರೆ, ಆದ್ದರಿಂದಲೇ ಮಕ್ಕಳ ಭಾವಲೋಕದಲ್ಲಿ ನಿರಾಯಾಸವಾಗಿ ಪಯಣಿಸುವ ಕೌಶಲವನ್ನು ಅವರು ಸಾಧಿಸಿಕೊಂಡಿದ್ದಾರೆ. ಕನ್ನಡದಲ್ಲಿನ ಮಕ್ಕಳ ಕಥಾಸಾಹಿತ್ಯವನ್ನು ಗಮನಿಸಿದಾಗ ಹೊಯ್ಸಳ ಮತ್ತು ನಪುಂಡಿ ಮಲ್ಲಾರಿಯವರ ಹೆಸರುಗಳು ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ. ಅವರು ತಮ್ಮ ಬಹಳಷ್ಟು ಕಥೆಗಳಲ್ಲಿ ಅನುಸರಿಸಿದ ವಾಸ್ತವ ಮಾರ್ಗವನ್ನೇ ತಮ್ಮಣ್ಣ ಬೀಗಾರರೂ ಆರಿಸಿಕೊಂಡಿದ್ದಾರೆ. ಇಲ್ಲಿನ ಕಥೆಗಳಲ್ಲಿ ಎಲ್ಲಿಯೂ ಉಪದೇಶ, ನೀತಿಬೋಧನೆ, ಬುದ್ಧಿವಾದ ಇತ್ಯಾದಿಗಳಿಲ್ಲ, ಆದರೆ ಕಥೆಯನ್ನು ಓದಿದ ಮಗುವಿನಲ್ಲಿ ಸಹಜವಾಗಿ ತಿಳವಳಿಕೆ ಅರಳುತ್ತದೆ ಎಂದಿದ್ದಾರೆ.
ಕತೆಗಾರ ತಮ್ಮಣ್ಣ ಬೀಗಾರ ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ...
READ MORE