‘ಹೊಸಯುಗದ ಮಕ್ಕಳಿಗೆ ಹೊಸ ಬಗೆಯ ಕಥೆಗಳು’ ಕೃತಿಯು ಆರ್. ಪಿ. ಹೆಗಡೆ ಅವರ ಕಥಾಸಂಕಲನವಾಗಿದೆ. ಸಾಮಾನ್ಯವಾಗಿ ಮಕ್ಕಳಿಗಾಗಿ ಬರೆದ ಕತೆಗಳು ಅಜ್ಜಿ ಕತೆಗಳೋ, ಜನಪದ ಕತೆಗಳೋ, ರಾಜ-ರಾಣಿ, ರಾಜಕುಮಾರಿ, ರಾಜಕುಮಾರರ ಕತೆಗಳೊ ಆಗಿರುತ್ತವೆ. ಆದರೆ ಈ ಕೃತಿಯು ಆಧುನಿಕ ಯುಗದ ಕತೆಗಳು. ಈ ಕೃತಿಯನ್ನು ಓದಿದಾಗ ಇಂದಿನ ಕಾಲದಲ್ಲಿ ಹೇಗೆ ಬದುಕಬೇಕು, ನಮ್ಮ ಬದುಕಿನಲ್ಲಿ ಯಾವುದಕ್ಕೆಲ್ಲ ಸ್ಥಾನವಿರಬೇಕು ಎಂಬ ಚಿಂತನೆಗೆ ಇಲ್ಲಿನ ಕತೆಗಳು ಹಚ್ಚುತ್ತವೆ. ಒಂದೊಂದೂ ಕತೆಯ ಮೂಲ ತಿರುಳಿಗೆ ಹೊಂದುವ ಸುಭಾಷಿತವೊಂದನ್ನು ಲೇಖಕರು ಕೆಳಗಡೆ ಕೊಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...
READ MORE