ಡೆಹ್ರಾಡೂನ್ ನಗರದಲ್ಲಿ ವಾಸಿಸುತ್ತಿರುವ ಸಂಜಯ್ ಸೋಂಧಿ ಅವರು ಹಲವಾರು ಲೇಖನಗಳನ್ನು ಬರೆದು ಮಕ್ಕಳ ಸಾಹಿತ್ಯದಲ್ಲೂ ತಮ್ಮ ಸಾಹಿತ್ಯ ಕೊಡುಗೆ ನೀಡಿದ್ದಾರೆ. ಇವರ ಬರಹವನ್ನು ಮಕ್ಕಳ ಸಾಹಿತ್ಯ ಲೋಕಕ್ಕೆ ಕನ್ನಡದಲ್ಲಿ ಅನುವಾದಿಸಿದವರು ಪರಿಸರವಾದಿ, ಪತ್ರಕರ್ತರಾದ ನಾಗೇಶ ಹೆಗಡೆಯವರು.
ಈ ಪುಸ್ತಕದಲ್ಲಿರುವ ಅನೇಕ ಸರಳ ಕತೆಗಳು ಮಕ್ಕಳ ವಿಸ್ಮಯ, ಕುತೂಹಲವನ್ನು ಹೆಚ್ಚಿಸುವ ಮತ್ತು ಡೆಹ್ರಾಡೂನ್ ನಿಸರ್ಗದ ಪರಿಚಯವನ್ನು ಸರಳವಾಗಿ ವರ್ಣರಂಜಿತ ಚಿತ್ರಗಳಿಂದ ಮಕ್ಕಳಿಗೆಸರಳ ಕತೆಗಳ ಮೂಲಕ ನೀಡಲಾಗಿದೆ. ಜೀವಲೋಕದ ವೈವಿಧ್ಯಮಯ ಪಕ್ಷಿಗಳು, ಚಿಟ್ಟೆಗಳು, ಕೀಟಗಳು, ಕಪ್ಪೆಗಳು, ಮರಗಪ್ಪೆಗಳು, ಕಾಡು ಬೆಕ್ಕು, ಹೀಗೆ ಅನೇಕ ಜೀವಿಗಳನ್ನು ಮಕ್ಕಳಿಗೆ ಪರಿಚಯಿಸುವ ಕಥೆಗಳಿವೆ. ನುಣುಚಿ ಓಡುವ ಇಣಚಿ, ಹಾವುಗಳಿಗೆ ಹೆದರದ ಮುಂಗುಸಿ, ಮರೆಯಾಗುತ್ತಿರುವ ಮನೆಗುಬ್ಬಿಗಳು, ಪಟರ್ ಪಟರ್ ಪಾರಿವಾಳ, ಅದು ಕುಪ್ಪಳ ಕಪ್ಪೆ, ಇದು ನಂಜಿನ ನೆಲಗಪ್ಪೆ, ಎಲ್ಲಿ ನೋಡಿದರಲ್ಲಿ ಹಲ್ಲಿ, ಓತಿ ,ಹಾಗೇಕೆ ತಲೆ ಹಾಕುತಿ ಹೀಗೆ ಅನೇಕ ಕಥೆಗಳು ಮಕ್ಕಳಿಗಾಗಿ ಇಲ್ಲಿವೆ.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE