ಲೇಖಕ ಸಂಪಟೂರು ವಿಶ್ವನಾಥ್ ಅವರು ಬರೆದ ಮಕ್ಕಳ ಸಾಹಿತ್ಯ ಕೃತಿ ʻನೀತಿಗೊಂದು ಕಥೆʼ. ಪುಸ್ತಕದಲ್ಲಿ ಒಟ್ಟು 82 ಕತೆಗಳನ್ನು ಹೇಳಲಾಗಿದೆ. ಆದರೆ ಅವುಗಳು ಮಕ್ಕಳಿಗೆ ನೀತಿಯನ್ನು ನೇರವಾಗಿ ಹೇಳಲು ಮುಂದಾಗದೆ ಕಾಲ್ಪನಿಕ ಕಥೆ ಹಾಗೂ ಸ್ವಾರಸ್ಯಕರವಾದ ಘಟನೆಗಳನ್ನು ಹೇಳುವ ಮೂಲಕ ಮಕ್ಕಳಿಗೆ ಕಥೆಯಿಂದ ಪಾಠವನ್ನು ಹೇಳಲಾಗಿದೆ. ಇಲ್ಲಿರುವ ಕಥೆಗಳು ದೇಶ ವಿದೇಶದ ಜಾನಪದಗಳಿಂದ ಆರಿಸಲ್ಪಟ್ಟವುಗಳಾಗಿವೆ. ಮಕ್ಕಳ ಅರಿವಿಗೂ, ಜ್ಞಾನಕ್ಕೂ ನೆರವಾಗುವ ಇದು ಉತ್ತಮವಾದ ಪುಸ್ತಕಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು.
ಲೇಖಕ ಸಂಪಟೂರು ವಿಶ್ವನಾಥ್ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...
READ MORE