‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಡಿ ಶಾಂತಾರಾಮ ಸೋಮಯಾಜಿ ಅವರು ಸಂಪಾದಿಸಿದ ಕೃತಿ-ದೇಶ ವಿದೇಶಗಳ ವಿನೋದ ಕಥೆಗಳು. ಇಲ್ಲಿ, ವಿನೋದ ಕಥೆಗಳು, ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳನ್ನು ಈ ಮಾಲೆಯಡಿ ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ,
ಶಾಂತಾರಾಮ ಸೋಮಯಾಜಿ ಅವರು ಲೇಖಕರು. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃತಿಗಳು: ಮೇರಿಯ ಕತೆ, ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ, ಅರ್ಥಮಂತ್ರಿ ಮತ್ತು ಹಂದಿಗಳು, ದೇಶವಿದೇಶಗಳ ವಿನೋದ ಕತೆಗಳು, ಚಿಟ್ಟೆಹಾಡು ಮತ್ತು ಇರುವೆ ಮದುವೆ. ಮಿತಿ ಇರದ ಖುಷಿ ಅದು ಸೈನ್ಸ್, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್. ...
READ MORE