‘ಬೇಡರ ಹುಡುಗ ಮತ್ತು ಗಿಳಿ’ ಕೃತಿಯು ಚಂದ್ರಶೇಖರ ಕಂಬಾರ ಅವರ ಮಕ್ಕಳ ಕತಾಸಂಕಲನವಾಗಿದೆ. ಇಲ್ಲಿಯ ಕತೆಗಳು ಆಕರ್ಷಕ ಚಿತ್ರಗಳೊಂದಿಗೆ ಕೂಡಿವೆ. ಆರು ಕತೆಗಳಿರುವ ಈ ಕೃತಿಯು ಹಲವಾರು ವಸ್ತು ವಿಚಾರಗಳನ್ನು ಒಳಗೊಂಡಿದೆ. ಕಾಡನ್ನು ಕೇಂದ್ರೀಕರಿಸಿಕೊಂಡು ರಚಿತವಾದ ಇಲ್ಲಿಯ ಕತೆಗಳು ‘ಬೇಡ ಮತ್ತು ಗಿಳಿ’ಯ ನಡುವಿನ ಸಂಭಾಷಣೆಯನ್ನು ಮುಖ್ಯವಾಗಿಸುತ್ತದೆ. ಲೇಖಕ-ಸಾಹಿತಿ ಚಂದ್ರಶೇಖರ ಕಂಬಾರ ಅವರ ಆಕರ್ಷಕ ನಿರೂಪಣಾ ಶೈಲಿಯನ್ನು ಇಲ್ಲಿ ಕಾಣಬಹುದು.
ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ...
READ MORE