ಲೇಖಕ ಬೆ.ಗೋ. ರಮೇಶ್ ಅವರು ನಸೀರುದ್ದೀನ್ ಮುಲ್ಲಾ ಅವರು ರಚಿಸಿದ ಕಥೆಗಳನ್ನು ಸಂಗ್ರಹಿಸಿ ಮಕ್ಕಳಿಗಾಗಿ ನೀಡಿರುವ ಕೃತಿ ಇದು-ಮುಲ್ಲಾನ ಕಥೆಗಳು. ಈ ಕಥೆಗಳು ಮಕ್ಕಳ ಮನಸ್ಸನ್ನು ಮುದುಗೊಳಿಸುತ್ತವೆ ಮಾತ್ರವಲ್ಲ; ಅವರ ಮನೋವಿಕಾಸಕ್ಕೆ ನೆರವಾಗುತ್ತವೆ. ಕಥೆಗಳಲ್ಲಿರುವ ತರ್ಕ, ಜಾಣ್ಮೆ, ಕುತೂಹಲ, ಚಾಣಾಕ್ಷತನ ಎಲ್ಲವೂ ಮಕ್ಕಳಿಗೆ ಪಾಠವಾಗುತ್ತವೆ. ಬಹುತೇಕ ವೇಳೆ, ಬದುಕಿನ ಸಮಸ್ಯೆಗಳ ಕುರಿತು ಅರಿವು ಮೂಡಿಸಿ, ಪರಿಹಾರವನ್ನೂ ಸೂಚಿಸುವಂತಿವೆ. ಸಮಸ್ಯೆ ಬಂದಾಗ ಎದೆಗುಂದದೇ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತೂ ಧೈರ್ಯ ನೀಡುವಂತಿವೆ.
ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...
READ MORE