ಲೇಖಕಿ ವೇದಾಮಂಜುನಾಥನ್ ಅವರ ಮಕ್ಕಳ ಕಥಾಸಂಕಲನ 'ಹಾರುವ ಚಿಟ್ಟೆಗಳು'. ಹಾರುವ ಚಿಟ್ಟೆಗಳು ಕಥಾಸಂಕಲನದಲ್ಲಿ ಒಟ್ಟು 25 ಸಣ್ಣ ಸಣ್ಣ ಕಥೆಗಳಿವೆ. ಮಲೆಕಾನು, ದೀಪದ ಬುಡ, ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ, ಅಜ್ಜಿಮನೆ, ರಾಜು ಮತ್ತು ತೋಟದ ಮಾಲಿ, ಗಾಜಿನ ಮನೆ, ಮೀರಾಳ ಮೊದಲ ಕವನ, ಚಿಗುರುವ ಬಳ್ಳಿ, ಕುರಿಮರಿ, ಬುದ್ಧಿವಂತ ಮೇಕೆ, ಇನ್ನಿತರೆ ಕಥೆಗಳಲ್ಲದೆ, ತೆನಾಲಿ ರಾಮಕೃಷ್ಣನ ಎರಡು ಕಥೆಗಳು, ಕವಿಗಳ ಪರಿಚಯ, ಹಂಪಿ ಸ್ಥಳ ಪರಿಚಯಗಳನ್ನು ಸಂಕಲನವು ಒಳಗೊಂಡಿದೆ. ಈ ಕಥೆಗಳನ್ನು ಮಕ್ಕಳು ಓದಬಹುದು ಅಥವ ಹಿರಿಯರು ಓದಿ ಮಕ್ಕಳಿಗೆ ಹೇಳಬಹುದಾಗಿದೆ. ಪ್ರತಿಯೊಂದು ಕಥೆಗಳ ಕೊನೆಯಲ್ಲಿ ಒಂದು ನೀತಿ ಇದೆ. ಇನ್ನು ಮಲೆಕಾನು ಎಂಬ ಕಥೆಯು 'ಕೋಲ್ಯಾನ ಕನಸು' ಎಂಬ ಶೀರ್ಷಿಕೆಯೊಂದಿಗೆ ಚಲನಚಿತ್ರಕ್ಕೆ ಆಯ್ಕೆ ಆಗಿದೆ.
ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ. ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...
READ MORE