ಪ್ರವಾಸೋದ್ಯಮ ಬಗ್ಗೆ ರಚನೆಯಾದ ಕೃತಿಯಾಗಿದೆ ಇದು. ಪ್ರವಾಸೋದ್ಯಮದ ಉದ್ದೇಶ, ಅದರ ಕಾರ್ಯ ವಿಧಾನ , ಅದರ ಸ್ವರೂಪ ಎಲ್ಲವನ್ನು ಈ ಕೃತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇಲ್ಲಿಯವರೆಗೆ ಒಟ್ಟು ಕನ್ನಡದಲ್ಲಿ ಯಾರೆಲ್ಲಾ ಯಾವ ಯಾವ ಪುಸ್ತಕವು ಪ್ರವಾಸೋದ್ಯಮದ ಬಗ್ಗೆ ಬರೆದಿದ್ದರೂ ಅವೆಲ್ಲದರ ಸಂಪೂರ್ಣ ಮಾಹಿತಿಯು ಈ ಕೃತಿಯಲ್ಲಿ ಒಳಗೊಂಡಿದೆ. ಓದುಗರ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರವಾಸೋದ್ಯಮದ ಬಗ್ಗೆ ವಿಶ್ಲೇ಼ಷಣೆ ಮಾಡಿರುವುದು ಇದರ ಹೆಚ್ಚುಗಾರಿಕೆ ಯಾಗಿದೆ. ಸಾಮಾಜಿಕ, ಸಾಂಸ್ಕತಿಕ ವಿಷಯದ ಬಗ್ಗೆ ವಿವರಣೆಯನ್ನು ಒದಗಿಸುತ್ತದೆ.
ಎಸ್. ವಿದ್ಯಾಶಂಕರ ಅವರು ಚಾಮರಾಜ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಜನಿಸಿದರು. ತಂದೆ ವಿದ್ವಾನ್' ಸ.ಸ. ಶಿವಶಂಕರಪ್ಪ ತಾಯಿ ವಿಶಾಲಾಕ್ಷಮ್ಮ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ೧೯೬೬ರಲ್ಲಿ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಎಂ.ಎ. ಪದವಿ ಗಳಿಸಿ ೧೯೭೧ರಲ್ಲಿ ಬೆಂಗಳೂರು ವಿ.ವಿ. ಪಿಎಚ್.ಡಿ. ಪದವಿ ಗಳಿಸಿದರು. ಬೆಂಗಳೂರು ವಿ.ವಿ. ಕನ್ನಡ ವಿಭಾಗದ ಸ್ನಾತಕೋತ್ತರ ಸಂಶೋಧನ ಸಹಾಯಕರಾಗಿ ಸೇವೆ ಸಲ್ಲಿಸಿ ೧೯೭೦ ರಿಂದ ೮೫ರರಿಗೆ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಂತರ ನಿರ್ದೇಶಕರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ವೃತ್ತಿಯಿಂದ ವಿಶ್ರಾಂತಿ ಪಡೆದರು. ೧೯೯೫೪-೯೭ರಲ್ಲಿ ಹಂಪಿಯ ಕನ್ನಡ ...
READ MORE