ಲೇಖಕ ಎಂ ನಂಜುಂಡಸ್ವಾಮಿ ಅವರು ಐಪಿಎಸ್ ಅಧಿಕಾರಿಯಾಗಿದ್ದು, ವಿಶ್ವ ಸಂಸ್ಥೆಯ ಸಾಂತಿ ಸ್ಥಾಪನಾ ಕಾರ್ಯ (2007) ನಿಮಿತ್ತ ಅವರು ಕೊಸೊವಾ ದೇಶಕ್ಕೆ ಹೋದಾಗ ಅಲ್ಲಿಯ ಜನರ ಭಾಷೆ, ಆಚಾರ--ವಿಚಾರಗಳನ್ನು ದಾಖಲಿಸಿಬೇಕೆಂಬ ಉದ್ದೇಶದೊಂದಿಗೆ ಬರೆದ ಕೃತಿ ಇದು. ಆ ಜನರ ಇತಿಹಾಸ, ಭಾವನೆ, ಪ್ರೀತಿ, ಸಿಟ್ಟು, ದ್ವೇಷ, ದೇಶಪ್ರೇಮ, ನಂಬಿದ ಬದುಕಿನ ನೀತಿ ಇತ್ಯಾದಿ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ವಿವರಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ ಪ್ರವಾಸ ಕಥನದಂತೆ ನೇರವಾಗಿ ಹೇಳುತ್ತಾ ಹೋಗದು ಈ ಕೃತಿ. ಸಾಂಸ್ಕೃತಿಕವಾಗಿ, ಸಾಹಿತ್ಯವಾಗಿ, ಜನಪದೀಯ ಆಚರ-ವಿಚಾರಗಳನ್ನು ದಾಖಲಿಸುತ್ತಾ, ಕವಿತೆಗಳ ರೂಪದಲ್ಲಿ, ಸಣ್ಣ ಸಣ್ಣ ಕಥೆಗಳ ರೂಪದಲ್ಲಿ, ಆ ದೇಶದ ಜನರ ಅನುಭವದ ಬೆಳಕಿನಲ್ಲಿ ಸಂಗತಿಗಳು ದಾಖಲಾಗುತ್ತಾ ಹೋಗುವುದು ಇಲ್ಲಿಯ ಬರೆಹಗಳ ವಿಶೇಷ.
ಎಂ. ನಂಜುಂಡಸ್ವಾಮಿಯವರು ದಿನಾಂಕ 28 ಮಾರ್ಚ್ 1970 ರಂದು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಜನಿಸಿದರು. ತಾಯಿ ಸರೋಜಮ್ಮ , ತಂದೆ ಮಹಾದೇವಯ್ಯ. ಮಳವಳ್ಳಿಯಲ್ಲಿ 1ನೇ ತರಗತಿ ನಂತರ ಅವಿಭಜಿತ ಧಾರವಾಡ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣ, .ಶಿರಹಟ್ಟಿಯಲ್ಲಿ 9ನೇ ತರಗತಿವರೆಗೆ 1985ರಲ್ಲಿ ಮುಂಡರಗಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದಿದರು. ಧಾರವಾಡದಲ್ಲಿ 1988 ರಲ್ಲಿ ಪಿಯೂಸಿ ಪಾಸಾದರು. ಕರ್ನಾಟಕ ರೀಜನಲ್ ಇಂಜನಿಯರಿಂಗ್ ಕಾಲೇಜ್, ಸೂರತಕಲ್ ಗೆ ಸೇರಿದರು. ಅಲ್ಲಿ 1993ರಲ್ಲಿ ಗಣಿ ತಂತ್ರಜ್ಞಾನದಲ್ಲಿ ಬ್ಯಾಚಲರ್ ಆಫ್ ಟೆಕ್ನೋಲಾಜಿ ಪದವೀಧರರು. ಗೋವಾ ರಾಜ್ಯದ ಡೆಂಪೋ ಮೈನಿಂಗ್ ಕಾರ್ಪೋರೇಷನ್ ...
READ MORE