‘ಬಸವ ನಾಡಿನಿಂದ ಮಂಡೇಲಾ ನಾಡಿಗೆ’ ಬಸವಪ್ರಭು ಪಾಟೀಲ್ ಅವರ ಪ್ರವಾಸ ಕಥನ. ಇದು ಶೈಕ್ಷಣಿಕ ಪ್ರವಾಸ (ಏಜ್ಯುಕೇಟೀವ್), ಇದರಲ್ಲಿ ಹಲವು ಪ್ರಮುಖ ಸ್ಥಳ ಮಹಿಮೆ, ನ್ಯಾಷನಲ್ ಕೂಗರ್ ಪಾರ್ಕ್ ಸಂದರ್ಶನ ಸೇರಿದಂತೆ ಲೇಖಕರನ್ನು ಭೇಟಿಯಾದ ವನ್ಯಜೀವಿಗಳು, ಪರ್ವತ ಶ್ರೇಣಿಗಳು, ಸಮುದ್ರವನ್ನು ಕುರಿತು, ಇನ್ನು ಅನೇಕ ವಿಚಾರಗಳನ್ನು ಈ ಪುಸ್ತಕದ ಮುಖಾಂತರವಾಗಿ ತಿಳಿಯಬಹುದಾಗಿದೆ.
ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸಾಹಿತಿಗಳು, ಶರಣ ಜೀವನವನ್ನು ಅಳವಡಿಸಿಕೊಂಡವರು. ಬೆಟ್ಟದೂರದಂತಹ ಊರಲ್ಲಿ ಹುಟ್ಟಿ ಮನೆಯ ಕಲೆ-ಸಾಹಿತ್ಯ-ಸಂಸ್ಕೃತಿ ಸಂಗಮದ ಪರಿಸರದಲ್ಲಿ ಬೆಳೆದವರು. ಎಂ.ಬಿ. ಬಿ.ಎಸ್, ಎಫ್, ಸಿ. ಜಿ. ಪಿ., ಡಿ.ಎಫ್. ಎಚ್. ಪದವಿಯನ್ನು ವೈದ್ಯಕೀಯದಲ್ಲಿ ಪಡೆದರು. ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಕಲ್ಯಾಣ ವೈದ್ಯಾಲಯ ಸ್ಥಾಪಿಸಿ ವೈದ್ಯರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ. ಇವರು ಕವಿಯಾಗಿ, ವೈಚಾರಿಕ ಸಾಹಿತಿಯಾಗಿದ್ದರಿಂದ ಮಾತನಾಡಿ ಹೆಣಗಳೇ, ಕವನ ಸಂಕಲನ, ಇದೇನು ಕತೆ, ವಿಚಾರ ಲೇಖನಗಳ ಸಂಗ್ರಹ ಹಾಗೂ ನವ ಸಾಕ್ಷರಿಗಾಗಿ ಪ್ರಥಮ ಚಿಕಿತ್ಸೆ ಕೃತಿ ಪ್ರಕಟಿಸಿದ್ದಾರೆ. ಪ್ರಪಂಚ, ವಿಶ್ವಕಲ್ಯಾಣ, ಸಂಕ್ರಮಣ, ...
READ MORE