ಗೋಮುಖ-ಎಂಬುದು ಡಾ. ಗಜಾನನ ಶರ್ಮ ಅವರ ಪ್ರವಾಸ ಕಥನ. ಕರಗಿ ಹೋಗುವ ಮುನ್ನ ಕಣ್ತುಂಬಿಕೊಳ್ಳೋಣ ಎಂಬ ಹಂಬಲದಿಂದ ತಾವು ಕೈಗೊಂಡ ಪ್ರವಾಸದ ಅನುಭವನಗಳನ್ನು, ಕಾಣ್ಕೆಗಳನ್ನು ಇಲ್ಲಿ ದಾಖಲಿಸಿದ್ದಾರೆ. ಇವರು ಸುತ್ತಾಡಿದ ಪ್ರದೇಶಗಳ ಬಗ್ಗೆ ವಿವಿಧ ಪ್ರವಾಸ ಕಥನಗಳು ಬಂದಿವೆಯಾದರೂ ಲೇಖಕರು ಅನುಭವ ವಿಭಿನ್ನ. ಬರಹ ಶೈಲಿಯಿಂದಲೂ ಅದು ಗಮನ ಸೆಳೆಯುತ್ತದೆ.
ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ...
READ MORE