‘ಜೆರುಸಲೆಂ’ ರಹಮತ್ ತರೀಕೆರೆ ಅವರ ವೈವಿಧ್ಯಮಯ ಲೇಖನಗಳ ಗುಚ್ಛ. ಹಲವಾರು ದೇಶಗಳ ಪ್ರವಸಾನುಭವ ಹಾಗೂ ಅಲ್ಲಿನ ಪರಿಸರ, ಜನಜೀವನ, ಅಲ್ಲಲ್ಲಿನ ಹಸಿ-ಬಿಸಿ ನೋಟಗಳು ಈ ಕೃತಿಯಲ್ಲಿ ಅಡಕವಾಗಿದೆ. ಲೇಖನಗಳ ವೈಶಿಷ್ಟ್ಯವೆಂದರೆ, ಪಡುವಣ ದೇಶಗಳ ಹಾಗೂ ನಮ್ಮ ದೇಶದ ಬಗೆಗಿನ ಪ್ರಾಮಾಣಿಕ ಅನಿಸಿಕೆ ಹಾಗೂ ತುಲನೆಗಳನ್ನು ಇಲ್ಲಿ ಕಾಣಬಹುದು. ನೇರವಾಗಿ ಇಲ್ಲಿ ಹೇಳದಿದ್ದರೂ ಪಶ್ಚಿಮದ ಏಳಿಗೆ ಅಭಿವೃದ್ದಿಗೆಗಳಿಗೆ ನಾವು ನೀಡಿದ ನೀಡುತ್ತಿರುವ ಪ್ರತಿಭಾ ಪಲಾಯನದ ಕೊಡುಗೆ ಕಾರಣವಾಗಿರಬಹುದೆಂಬ ಸಂಗತಿ ಈ ಕೃತಿಯ ಮುಖೇನ ಓದುಗನಿಗೆ ತಿಳಿಯುತ್ತದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...
READ MORE