ಲೇಖಕಿ ಭಾರತಿ ಬಿ.ವಿ. ಅವರ ಪ್ರವಾಸ ಕಥನ ʻನಕ್ಕತ್ರಗಳ ಸುಟ್ಟ ನಾಡಿನಲ್ಲಿ- ಇದು ಪೋಲೆಂಡ್ ಪ್ರವಾಸ ಕಥನʼ..ಇತಿಹಾಸ ಪ್ರಧಾನವಾಗಿರುವ ಸ್ಥಳಗಳು, ಅಲ್ಲಿನ ಪ್ರಸಿದ್ದ ನಾಯಕರು, ಜನರ ಸಂಸ್ಕೃತಿ ಹೀಗೆ ಹಲವಾರು ವಿಷಯಗಳನ್ನು ಕಂಡು ಅನುಭವಿಸಿದ ನೆನಪಿನ ಕತೆಗಳನ್ನು ಲೇಖಕಿ ಇಲ್ಲಿ ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ಹಾಗೆಯೇ, ಓದುತ್ತಾ ಅಡೋಲ್ಫ್ ಹಿಟ್ಲರ್ನ ಆಡಳಿತ, ಜನರ ಮೇಲೆ ತೋರುತ್ತಿದ್ದ ಕ್ರೌರ್ಯ, ಗ್ಯಾಸ್ ತುಂಬಿದ ಕಾನ್ಸಂಟ್ರೇಶನ್ ಕ್ಯಾಂಪ್ನಿಂದ ಯಹೂದಿಗಳನ್ನು ಆಸ್ಕರ್ ಶಿಡ್ಲಂರ್ಸ್ ಎಂಬ ಉದ್ಯಮಿ ಶಿಡ್ಲಂರ್ಸ್ ರಕ್ಷಿಸಿದ ಕತೆಗಳು ಬೆಚ್ಚಿಬೀಳಿಸುವಂತಹವು. ಶಿಡ್ಲಂರ್ಸ ಎಂಬ ಅಜ್ಞಾತ ಸಾಹಸಿಗನ ಸಾಹಸ ದೃಶ್ಯಗಳಂತೂ ಓದುಗನನ್ನು ಕಾಡುವಂತಿದೆ.
ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್ ಕವಿತೆಗಳು', 'ಜಸ್ಟ್ ಮಾತ್ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ...
READ MORE