‘ಕೈಲಾಸ ಮಾನಸ’ ಕೃತಿಯು ಗಜಾನನ ಶರ್ಮ ಅವರ ದೇವಭೂಮಿಗೊಂದು ಪಯಣದ ಬರಹಗಳ (ಪ್ರವಾಸ ಕಥನ) ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಇದು ಕೇವಲ ಪ್ರವಾಸ ಕಥನವಾಗಿಲ್ಲ. ಜೊತೆಗೆ, ಸ್ಥಳೀಯ ಐತಿಹ್ಯ-ಪುರಾಣಗಳನ್ನು ಪರಿಚಯಿಸುತ್ತಾ ಓದುಗರಿಗೆ ಒಂದಿಷ್ಟೂ ಬೇಸರ-ಆಯಾಸವಾಗದಂತೆ ಹಿಮಾಲಯ- ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಚಯ ಮಾಡಿಕೊಡುತ್ತಾರೆ. ಶರ್ಮರ ಎದುರಿಗೆ ಹಿಮಾಲಯದ ಸುದ್ದಿ ಎತ್ತಿದರೆ ‘ಆ ಪ್ರಪಂಚವೇ ಬೇರೆ, ಅದು ದೇವಲೋಕವೇ ಸರಿ. ಬೇಕೆಂದರೆ ನಮ್ಮ ಅನುಕೂಲಕ್ಕೆ ದೇವ ಭೂಮಿ ಎಂದರೂ ಆದೀತು, ಆ ತಣ್ಣನೆಯ ಮೌನ, ಬೆಳ್ಳನೆಯ ಹಿಮ..ಆಹಾ’ ಎನ್ನುತ್ತಾ ತಮ್ಮದೇ ಭಾವ ಪ್ರಪಂಚಕ್ಕಿಳಿದು ಬಿಡುತ್ತಾರೆ’ ಎಂದಿದೆ.
ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2011
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2010