ಎ.ಕೆ. ಕುಕ್ಕಿಲ ಅವರ ಉಮ್ರಾ ಅನುಭವವನ್ನು ಹೇಳುವ ವಿಭಿನ್ನ ಕೃತಿ “ಎಣ್ಣೆ ಬತ್ತಿ ಲಾಟೀನು', ಉಮಾ-ಪ್ರವಾಸ ಮುಸ್ಲಿಮರ ಪಾಲಿಗೆ ಒಂದು ಧಾರ್ಮಿಕ ವಿಧಿಯಾಗಿದೆ. ಆದರೆ ಒಬ್ಬ ಸೃಜನಶೀಲ ಲೇಖಕನಿಗೆ ಅದು ಕೇವಲ ಒಂದು ಪ್ರವಾಸವಷ್ಟೇ ಅಲ್ಲ. ಹಾಗೆಯೇ ಅದು ಕೇವಲ ಧಾರ್ಮಿಕ ವಿಧಿಯೂ ಅಲ್ಲ. ಆತನಿಗೆ ಅದರಾಚೆಗೆ ನೋಡುವ ಹಲವು ಅವಕಾಶಗಳಿರುತ್ತವೆ. ಈ ಕಾರಣದಿಂದಲೇ ಕುಕ್ಕಿಲ ಅವರ ಕೃತಿ ಒಂದು ಆಧ್ಯಾತ್ಮಿಕ ಅನುಭವ ಮಾತ್ರವಲ್ಲ. ಈ ಕೃತಿ, ಇತಿಹಾಸ, ವರ್ತಮಾನವನ್ನು ಬೆಸೆಯುವ ಪ್ರಯತ್ನವನ್ನು ಮಾಡುತ್ತದೆಯಲ್ಲದೆ, ಆ ಮೂಲಕ ಮನುಷ್ಯ ತನ್ನ ಹೊಸ ಭವಿಷ್ಯವನ್ನು ರೂಪಿಸಿಕೊಳ್ಳುವ ಆಶಯವನ್ನು ಪ್ರಕಟಿಸುತ್ತದೆ. ಹಿರಿಯ ಲೇಖಕ ಬಿ. ಎಂ. ಹನೀಫ್ ಈ ಕುರಿತಂತೆ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ನನ್ನ ಪ್ರಕಾರ ಇದು ಕೇವಲ ಒಂದು ಪ್ರವಾಸ ಕಥನವಲ್ಲ. ಮಂಗಳೂರಿನಿಂದ ಮಕ್ಕಾದವರೆಗೆ ಹೋಗಿ ಬಂದ ನೀವು ಅಲ್ಲಿ ಹೆಜ್ಜೆ ಹೆಜ್ಜೆಗೂ ಇಸ್ಲಾಮಿನ ಹೆಜ್ಜೆ ಗುರುತುಗಳನ್ನು ವಿಶ್ಲೇಷಿಸಿದ ಅತ್ಯಪೂರ್ವ ವೈಚಾರಿಕ ಓದು ಇದು. ಇಸ್ಲಾಮಿ ಇತಿಹಾಸದ ತಳಸ್ಪರ್ಶಿ ಓದಿನ ಹಿನ್ನೆಲೆ ಇದ್ದುದರಿಂದಲೇ ಈ ಓದಿಗೆ ಭಾವುಕ ಸ್ಪರ್ಶದ ಜೊತೆಗೆ ಒಂದು ವೈಚಾರಿಕ ಗಾಂಭೀರ್ಯವೂ ದಕ್ಕಿದೆ.
ಲೇಖಕ ಏ.ಕೆ. ಕುಕ್ಕಿಲ ಅವರು ‘ಡೇಟ್ ಫ್ಯಾಕ್ಟ್ ’ ಎಂಬ ಚಾನೆಲ್ ಮೂಲಕ ಚಿರಪರಿಚಿತರು. ಖ್ಯಾತ ಅಂಕಣಕಾರರು ಹಾಗೂ ಪತ್ರಕರ್ತರೂ ಆಗಿರುವ ಕುಕ್ಕಿಲ ಅವರ ಸಾಹಿತ್ಯಿಕ ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾಲದ ಎದುರು ಇತಿಹಾಸವನ್ನು ಹರಡಿಕೊಂಡು ತನ್ಮಯತೆ ಮತ್ತು ಭಾವನಾತ್ಮಕತೆಯೊಂದಿಗೆ ಒಂದು ಪ್ರವಾಸವನ್ನು ಹೇಗೆ ಕಟ್ಟಿಕೊಡಬಹುದು ಎಂಬುದನ್ನು ಕುಕ್ಕಿಲ ಅವರು ತಮ್ಮ ’ಎಣ್ಣೆ ಬತ್ತಿದ ಲಾಟೀನು’ ಕೃತಿಯಲ್ಲಿ ಚಿತ್ರಿಸಿದ್ದಾರೆ. ಸರಸ-ಸಲ್ಲಾಪ, ವೈರಸ್ ಹಾಗೂ ಅಮ್ಮನ ಕೋಣೆಗೆ ಏಸಿ ಅವರ ಪ್ರಕಟಿತ ಕೃತಿಗಳು. ...
READ MORE