ಶ್ರೀಲಂಕಾದ ಬುದ್ಧ ನೆಲೆಯನ್ನು ವರ್ಣಮಯವಾಗಿ ನೀಡಿರುವ ಕೃತಿ ಇದಾಗಿದ್ದು ಒಂದು ಪ್ರವಾಸ ಕಥನವೂ ಹೌದು. ಲೇಖಕ ಪೂರೀಗಾಲಿ ಮರಡೇಶಮೂರ್ತಿ ಅವರು ಎಸ್. ಶ್ರೀಕಾಂತ್ ಜತೆಗೂಡಿ ಸಂಗ್ರಹಿಸಿ, ಬರೆದು ಹೊರ ತಂದಿರುವ ಕೃತಿ `ದ್ವೀಪ ರಾಷ್ಟ್ರ ಶ್ರೀಲಂಕಾ ಬುದ್ಧಮಯ’. 'ವಿಸ್ಮಯಗಳ ಗೂಡು ಶ್ರೀಲಂಕಾ', 'ಬುದ್ಧನೆಂಬ ಸಾರ್ವಕಾಲಿಕ ಸತ್ಯ', 'ರಾವಣನ ಲಂಕೆ ಶ್ರೀಲಂಕಾ ಬುದ್ಧಮಯ', 'ನೂರು ದೇವರ ನೂಕಾಚೆ ದೂರ' ಮುಂತಾದ ಲೇಖನಗಳನ್ನು ಕಾಣಬಹುದು.
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE