ಖಗೋಳ ವಿಜ್ಞಾನಿ ಎಸ್. ಚಂದ್ರಶೇಖರ್ ಅವರನ್ನು ಭೇಟಿ ಮಾಡಲೇಬೇಕು ಎಂದು ತಮ್ಮ ಮಗನಿಗೆ ಪಟ್ಟು ಹಾಕಿ ಅಮೆರಿಕಕ್ಕೆ ತೆರಳಿದ ಸಾಹಿತಿ ಜಿ.ಟಿ. ನಾರಾಯಣರಾವ್, ವಿಜ್ಞಾನಿಯ ಜೀವನ ಚರಿತ್ರೆ ಬರೆಯುವುದರ ಜೊತೆಗೆ ಪ್ರವಾಸ ಸಾಹಿತ್ಯವನ್ನೂ ರಚಿಸುತ್ತಾರೆ. ಅದೇ ’ಸಪ್ತಸಾಗರದಾಚೆಯೆಲ್ಲೋ’.
ಸುಮ್ಮನೆ ಅಲೆದಾಡುವುದು, ಜನ ಜಂಗುಳಿಯಲ್ಲಿ ಕಳೆದು ಹೋಗುವುದು, ಮ್ಯೂಸಿಯಮ್ಮುಗಳಲ್ಲಿ ಮೈಮರೆಯುವುದರ ಬಗ್ಗೆ ಕೃತಿ ಪ್ರಸ್ತಾಪಿಸದೇ ಇರುವುದು ವಿಶೇಷ. ಇದೊಂದು ಪ್ರವಾಸಕಥನವಾದರೂ ವಿಜ್ಞಾನಿಯನ್ನು ಸಂದರ್ಶಿಸಿದ ಛಾಯೆ ಢಾಳಾಗಿ ಕಾಣುತ್ತದೆ. ಇದನ್ನು ಸ್ವತಃ ಲೇಖಕರೇ ಹೇಳಿಕೊಂಡಿದ್ದಾರೆ.
ಹೀಗಾಗಿ ಪ್ರವಾಸ ಕಥನವೂ ಆಗಿರುವ ವ್ಯಕ್ತಿ ಚಿತ್ರಣವೂ ಆಗಿರುವ ಈ ಕೃತಿ ವಿಭಿನ್ನ ನೆಲೆಯಲ್ಲಿ ಗಮನ ಸೆಳೆಯುತ್ತದೆ.
ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...
READ MORE