ಡಾ. ಜಯಂತಿ ಮನೋಹರ್ ಹಾಗೂ ಬಿ.ಎಸ್ ಮನೋಹರ್ ಅವರು ದೇಶ-ವಿದೇಶಗಳ ಪರ್ಯಾಟನೆ ಕುರಿತ ಪ್ರವಾಸ ಕಥನ -ಸಾಗರದಾಚೆ ಹರಡಿರುವ ಭಾರತೀಯ ಸಂಸ್ಕೃತಿ. ದಕ್ಷಿಣ ಪೂರ್ವ ಹಾಗೂ ಪೌರ್ವಾತ್ಯ ದೇಶಗಳಲ್ಲಿ ಹರಡಿರುವ ಹಾಗೂ ಇನ್ನೂ ಪ್ರಭಾಯುತವಾಗಿಯೇ ಉಳಿದಿರುವ ಭಾರತೀಯ ಸಂಸ್ಕೃತಿಯ ಕುರುಹುಗಳ ಕುರಿತು ಈ ಕೃತಿ ಅಧ್ಯಯನ ಮಾಡುತ್ತದೆ. ಸಂಸ್ಕೃತಿಯ ಎಲ್ಲೆಗಳ ನಡುವಿನ ಮಾಹಿತಿಯ ಮಹಾಪೂರವು ಈ ಕೃತಿಯಲ್ಲಿದೆ. ಇದು ಕೇವಲ ಪ್ರವಾಸ ಕಥನದ ಹಂದರ ಆಗಿರದೇ ಭಾರತೀಯರ ಸುಸಂಸ್ಕೃತಿಯ ನೆಲೆಗಟ್ಟಿನ ಭಾಗಗಳಾದ ಕಲೆ, ಸಾಹಿತ್ಯ, ನಾಟಕ, ನೃತ್ಯ ವಿಚಾರಗಳನ್ನು ವ್ಯಕ್ತಪಡಿಸಿದ ವೇದಿಕೆಯಾಗುತ್ತದೆ ಎಂಬುದು ಲೇಖಕರ ಅಭಿಪ್ರಾಯ.
ಡಾ. ಜಯಂತಿ ಮನೋಹರ್ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಪ್ರಾಥಮಿಕ ವಿದ್ವಾಂಸವನ್ನು ಪಡೆದಿದ್ದು, ಥಾಯ್ ಲ್ಯಾಂಡ್ ಹಾಗೂ ಕಾಂಬೋಡಿಯಾದಲ್ಲಿ ಭಾರತೀಯರ ಸಂಸ್ಕೃತಿ ಎನ್ನುವುದು ಇವರ ಪ್ರವಾಸ ಕಥನವಾಗಿದೆ. ಜಯಂತಿ ಮನೋಹರ್ 1951 ರ ಅಕ್ಟೋಬರ್ ೨ ರಂದು ಜನಿಸುತ್ತಾರೆ. ಲೇಖಕರ ತಂದೆ ಹೆಸರು ನಾಗರಾಜ್, ತಾಯಿ ಅಮೃತಬಾಯಿ. ಎಸ್.ಬಿ.ಎಂ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸುವ ಲೇಖಕಿ ನಂತರದ ದಿನಗಳಲ್ಲಿ ಭಾಷಾ ಅಧ್ಯಯನಕ್ಕೆ ಪ್ರಮುಖ್ಯತೆಯನ್ನು ನೀಡುತ್ತಾರೆ. ನಾಟಕ ಪ್ರದರ್ಶನಗಳೇ ಇವರ ಆಕರ್ಷಣಾ ಕೇಂದ್ರವಾಗಿತ್ತು. ನಾಟಕ ರಚನಾಕಾರರು ಹಾಗೂ ನಿರ್ದೇಶಕರಾಗಿರುವ ಜಯಂತಿ ಮನೋಹರ್ ಅವರ ಪತಿ ಬಿ. ಮನೋಹರ್ ಜೊತೆಯಾಗಿ ರಂಗಭೂಮಿ, ಟಿ.ವಿ ಧಾರವಾಹಿ, ...
READ MORE