ಲೇಖಕಿ, ಅನುವಾದಕಿ ಸುಮಂಗಲಾ ಮುಮ್ಮಿಗಟ್ಟಿಯವರು ಅಂಡಮಾನ್ ಪ್ರವಾಸದ ಅನುಭವಗಳನ್ನು ’ಅದ್ಭುತ ಜೀವಾವಾಸ ಅಂಡಮಾನ್’ ಎಂಬ ಪ್ರವಾಸ ಕಥನದ ಮೂಲಕ ಹೊರತಂದಿದ್ದಾರೆ.
ಈ ಪ್ರವಾಸ ಕಥನವು ಕೇವಲ ಪ್ರವಾಸಿಗರ ತಾಣವಾಗಿರದೆ, ಇತಿಹಾಸದ ಪರಿಚಯಕ್ಕೂ, ಜೀವ ವೈವಿಧ್ಯಗಳ ಪ್ರಾಚೀನತೆಗಳ ಸಂಗತಿಯ ಆಗರವಾಗಿಯೂ ಪ್ರವಾಸಿಗರನ್ನು ಸೆಳೆಯುತ್ತದೆ. ಸುಮಂಗಲಾ ಅವರ ಪ್ರವಾಸದ ಅನುಭವ ಅಂಡಮಾನ್ ದ್ವೀಪದ ಬಗ್ಗೆ, ಶಾಂತ ಉಷ್ಣವಲಯದ ವಾತಾವರಣದ ಬಗ್ಗೆ , ಹವಳದ ದಿಬ್ಬಗಳ ಬಗ್ಗೆ, ವೈವಿಧ್ಯಮಯ ಸಮುದ್ರ ಜೀವಿಗಳ ಬಗ್ಗೆಯೂ ತಿಳಿಸುವ ವಿಶೇಷ ಕಥನವಾಗಿದೆ.
ಮುಖ್ಯವಾಗಿ ಸುಮಂಗಲಾ ಅವರು ಪ್ರಕೃತಿ ಪ್ರೇಮಿಯ ಪ್ರವಾಸ ಕಥನ ಎನ್ನುವುದರ ಹಿನ್ನಲೆಯಾಗಿ ಪ್ರಕೃತಿಯ ಸೌಂದರ್ಯವನ್ನು, ಸಾಮಾನ್ಯ ಜೀವಿಗೂ ಸಹ ಪ್ರಕೃತಿ ನೀಡುವ ಚೈತನ್ಯಪೂರ್ಣ ಅನುಭವವನ್ನು ವಿವರಣಾತ್ಮಕವಾಗಿಯೂ, ಕಲಾತ್ಮಕ ವರ್ಣನೆಗಳಿಂದಲೂ ’ಅದ್ಭುತ ಜೀವಾವಾಸ ಅಂಡಮಾನ್’ ಕೃತಿಯಲ್ಲಿ ವಿವರಿಸಿದ್ಧಾರೆ.
ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ಸುಮಂಗಲಾ ಅವರು ಈ ಪರಿಸರ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲದೇ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ ಪಡೆದಿದ್ದಾರೆ. ಜೈವಿಕ ವೈವಿಧ್ಯದ ಅತ್ಯುತ್ತಮ ಸಂವಹನಕ್ಕಾಗಿ ಲಂಡನ್ನಿನ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಯ ಮನ್ನಣೆ ಪಡೆದಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ಇವರು ವಿಜ್ಞಾನ ಕಾರ್ಯಕ್ರಮಗಳಿಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರು. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ನವಕರ್ನಾಟಕದ ವಿಜ್ಞಾನ ಸರಳ ಪರಿಚಯ ಮಾಲಿಕೆಯ ಸಂಪಾದಕರಲ್ಲಿ ಒಬ್ಬರು. ಇವರ ಹಲವಾರು ಪುಸ್ತಕ- ಲೇಖನ ...
READ MORE